Advertisement

ಸುಕನ್ಯಾ ಕನಾರಳ್ಳಿ

ವ್ಯಂಗ್ಯ ದರ್ಶನದ ಕವಿ ಪಾ.ವೆಂ. ಆಚಾರ್ಯ

ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ.

Read More

ಸಮಾಜ ವಿಮರ್ಶಕ ಕವಿ ಅ.ಗೌ.ಕಿನ್ನಿಗೋಳಿ

ಕರಾವಳಿಯಲ್ಲಿ ಖಂಡಕಾವ್ಯಗಳನ್ನು ಬರೆದ ನವೋದಯ ಕವಿಪರಂಪರೆಯ ಕೊನೆಯ ಕೊಂಡಿ ಅಂದರೆ, ಕರಾವಳಿಯ ಮೊದಲನೆಯ ಗಣ್ಯ ದಲಿತ ಕವಿ ಅಚ್ಯುತಗೌಡ ಕಿನ್ನಿಗೋಳಿ.  ಅ.ಗೌ.ಕಿನ್ನಿಗೋಳಿ ಎಂಬ ಹೃಸ್ವ ಹೆಸರೇ ಅವರ ಕಾವ್ಯನಾಮ.  ಸಮಕಾಲೀನ ಕವಿಗಳ ಕಾವ್ಯವಸ್ತುವನ್ನೇ ಮುಂದುವರೆಸಿ, ಅದಕ್ಕೆ ಬೇರೊಂದು ಮುಕ್ತಾಯ ನೀಡುವ ಅವರ ಶೈಲಿ ವಿಭಿನ್ನವಾದುದು.  ಕನ್ನಡ ಮತ್ತು ಸಂಸ್ಕೃತ ಪದವಿ ಪಡೆದಿದ್ದ ಅವರು ಯಕ್ಷಗಾನ ಅರ್ಥಧಾರಿಯಾರಿಯೂ ಆಗಿದ್ದರು.

Read More

ನವೋದಯ ದೀಪಕ್ಕೆ ಎಣ್ಣೆ ಹೊಯ್ದ ಕವಿ

ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.

Read More

ನವೋದಯದಿಂದ ನವ್ಯಕ್ಕೆ ಪೇಜಾವರ ಸದಾಶಿವ ರಾವ್

ಕನ್ನಡದ ಆಧುನಿಕ ಕವಿಗಳನ್ನೆಲ್ಲ ಓದಿ, ಬರೆದುಕೊಂಡು, ತಾವು ಸ್ವತಃ ಕವನಗಳನ್ನು ಬರೆದು ತಮ್ಮನ್ನು ಸ್ವತಃ ತಿದ್ದಿಕೊಂಡು, ಗೋಕಾಕರಂಥ ವಿಮರ್ಶಕರ ಅಭಿಪ್ರಾಯವನ್ನು ಕೇಳಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಾಹಿತ್ಯ ರಚನೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹೇಳಿ ತಾನೂ ಬೆಳೆದ ಪೇಜಾವರ ಸದಾಶಿವರಾಯರು ತಮ್ಮೊಂದಿಗೆ ಇತರರನ್ನೂ ಬೆಳೆಸಿದ ಸಾಹಿತಿ. ಚಿತ್ರಕಲೆ ಟೆನಿಸ್ ಆಟ, ಸಿತಾರ್ ನುಡಿಸುವುದು, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಾರಣ, ಮೌಂಟೆನಿಯರಿಂಗ್  ಮುಂತಾದ ಆಸಕ್ತಿಗಳನ್ನು ಹೊಂದಿದ್ದ ಜೀವನ್ಮುಖಿ ಅವರಾಗಿದ್ದರು. 

Read More

ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜ

ಉಡುಪಿಯ ಸಾಂತ್ಯಾರು ವೆಂಕಟರಾಜರು ಪತ್ರಿಕೆಗಳಲ್ಲಿ 1930 ರಿಂದ (ತಮ್ಮ 17 ನೆಯ ವರ್ಷದಿಂದ) ನಿರಂತರವಾಗಿ ಕವಿತೆಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಅವರ ಕಾವ್ಯದಲ್ಲಿ ಅವರ ಬದುಕಿನ ನಾಲ್ಕು ಕಾಲಘಟ್ಟದಲ್ಲಿ ನಾಲ್ಕು ಬಗೆಯ ವಸ್ತುಗಳಿಗೆ ಪ್ರಾಮುಖ್ಯ ಸಿಕ್ಕಿರುವುದನ್ನು ಅಥವಾ ವಸ್ತುವಿನ ಪರಿಶೀಲನೆಯ ಕ್ರಮದಲ್ಲಿ ಆಗಿರುವ ಬದಲಾವಣೆಯನ್ನು ಕಾಣಬಹುದು: -ಡಾ.ಬಿ. ಜನಾರ್ದನ ಭಟ್ ನವೋದಯದ ಕವಿರಾಜಹಂಸ ಸಾಂತ್ಯಾರು ವೆಂಕಟರಾಜರ ಕುರಿತು ಬರೆದಿದ್ದಾರೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ