Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

Read More

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

“ಕಟ್ಟಿಬಿಟ್ಟಿದ್ದಾರೆ ಈಗಲೂ
ಅಂಗನೆಯರ ಕೊಲ್ಲಲು ಅರಗಿನ ಅರಮನೆಗಳನು
ಚಿಂತೆಯಲಿ ಬಿದ್ದಿದ್ದಾರೆ ಬೆಂಕಿ ತಾಗಿಸುವ
ಅಣ್ಣಂದಿರು
ಯಾವ ದೊರೆಮಕ್ಕಳು ಮಂಚದಲಿ
ಮಲಗಿಹರೋ ಎಂದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More

ನೀರಿನ ನೆರಳು:‌ ಪ್ರಕಾಶ್‌ ಪೊನ್ನಾಚಿ ಬರಹ

ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

Read More

ಊರು ಬಿಟ್ಟವರ ಹಾಡುಪಾಡು

ಜೀವದಿಂದಿಡಿದು ಜೀವನದೊಟ್ಟಿಗೆ ಬೆರೆತುಹೋಗಬೇಕಿದ್ದ ಭಾಷೆಯನ್ನು ನಿಧಾನಕ್ಕೆ ಮರೆಯಲಾರಂಭಿಸಿ, ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಹಳ್ಳಿಗಳನ್ನ ತೊರೆದು ಎಲ್ಲವೂ ವ್ಯಾಪಾರವಾಗಿರುವ ಪಟ್ಟಣದ ಮೋಹಕ್ಕೆ ಒಂದು ತಲೆ ಮಾರನ್ನೇ ವರ್ಗಾಯಿಸಿದ್ದು ದುರಂತವಲ್ಲದೇ ಮತ್ತೇನು? ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿದ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು.
ಪ್ರಕಾಶ್‌ ಪೊನ್ನಾಚಿ ಬರಹ

Read More

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ…

“ಸಾವನ್ನೇ ಸೊಂಟಕ್ಕೆ ಸುತ್ತಿ
ಡಾಬು ಹೆಣೆದವಳು
ಸತ್ತಳೆಂದರೆ ದಿಟವೇ?
ಇರಿ ಅವಳು
ಲೋಕದ ನೋವಿಗೆ ನೂಕುನುಗ್ಗಲಿನಲಿ
ಔಷಧಿ ಖರೀದಿಸುತ್ತಿರಬಹುದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ