ಕಾಣದ್ದು ಕಾಣಿಸಿದ್ದು…!: ಸುಭಾಷ್ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ
ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ.
ಸುಭಾಷ್ ರಾಜಮಾನೆ ವಿಮರ್ಶಾ ಕೃತಿ “ಕಂಡದ್ದು ಕಾಣದ್ದು” ಕುರಿತು ಕಲ್ಲೇಶ್ ಕುಂಬಾರ್ ಬರಹ