ನಾಟಕ ಕಂಪನಿ ಮತ್ತು ಒಲವಿನ ಪತ್ರ: ಜುಲೇಖಾ ಬೇಗಂ ಜೀವನ ವೃತ್ತಾಂತ
ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ನಾಲ್ಕನೆಯ ಕಂತು

