Advertisement

ಕೆ. ಸತ್ಯನಾರಾಯಣ

ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ನಾನೆಂಬ ‘ನನ್ನ’ನ್ನು ಅಳಿಸುವ ಆಧ್ಯಾತ್ಮಿಕ ಜಗತ್ತು: ಜುಲೇಖಾ ಬೇಗಂ ಜೀವನ ವೃತ್ತಾಂತ

ಕುರ್ಚಿ ಅಡಿಗಳಲ್ಲಿ, ನೆಲ ಮತ್ತು ಚಾಪೆಯ ಸ್ಥಳಗಳನ್ನು ಗುಡಿಸಿ ಸ್ವಚ್ಛಗೊಳಿಸುವುದೆಂದರೆ ಬರೋಬ್ಬರಿ ಎರಡು ಗಂಟೆಗಳ ಕೆಲಸ. ನನ್ನ ಎಳೆ ರಟ್ಟೆಯಲ್ಲಿದ್ದ ಶಕ್ತಿಯೆಲ್ಲವೂ ಸೋರಿ ಹೋದಂತೆ ಅನಿಸುತ್ತಿತ್ತು. ನಟಿ ಫ್ಲೋರಿನಾ ಬಾಯಿಯವರದ್ದೇ ಮೇಲುಸ್ತುವಾರಿ. ‘ಇನ್ನೂ ಆಗಿಲ್ಲವಾ?’ ಎಂದು ಅಧಿಕಾರ ಸಾಧಿಸುವ ಮಾತುಗಳನ್ನೇ ಪ್ರಶ್ನೆಯಾಗಿ ಕೇಳುತ್ತಿದ್ದರು. ಅಂದಹಾಗೆ, ಇದೆಲ್ಲದರ ನಡುವೆ ಅವರ ಸಾಕಿದ ಮಗಳು ದೂರದ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ರಜೆಗೆಂದು ಬಂದಾಗ ನನ್ನನ್ನು ಕಂಡಳು. ಆಡಲು ಜೊತೆಯಾಗುತ್ತಾಳೆ ಎಂದುಕೊಂಡಿದ್ದಳೋ ಏನೊ, ಅದಕ್ಕಾಗಿ ನನ್ನ ಬರುವಿಕೆಯನ್ನೇ ದೂರದಲ್ಲೇ ನಿಂತು ಕಾಯುತ್ತಿದ್ದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

Read More

ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಗಂಟಲಿನಿಂದ ಅದೆಷ್ಟೇ ಉಸಿರೆಳೆದರೂ, ನಾಲಗೆಯನ್ನು ಹೊರಳಿಸಿ ಉರುಳಿಸಿದರೂ ಊಹೂಂ, ಹಾಲು ಹಣ್ಣು ಬರಲೊಲ್ಲದು. ಅವರೂ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಪಕ್ಕದಲ್ಲಿ ಪುಂಡಿ ಸೊಪ್ಪನ್ನು ಬಿಡಿಸಿಟ್ಟಿದ್ದರು. ಆ ಪುಂಡಿ ಕೋಲು ದಪ್ಪವಾಗಿರುತ್ತದೆ. ಮುಂದೇನು ಆಗಿರಬಹುದು ಹೇಳಿ? ಅನುಮಾನವೇ ಬೇಡ, ಬೆನ್ನಿಗೆ ಎರಡೇಟು ಬಾರಿಸಿದರು. ಚುರ್ ಎಂದು ಬಿದ್ದ ಏಟಿಗೆ ಕಣ್ಣಲ್ಲಿ ನೀರು ಜಿನುಗಿಸಿತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಏಳನೆಯ ಕಂತು

Read More

ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಿಡುವಿದ್ದಾಗೆಲ್ಲ ಅವರ ಮನೆಗೆ ಹೋಗುವುದು ಸಾಮಾನ್ಯವಾಯಿತು. ಸುಮ್ಮನಿರುವ ಗೆಜ್ಜೆ ನನ್ನ ಮನಸ್ಸಲ್ಲೇನೊ ಸದ್ದು ಮಾಡಿದರಂತೆ. ‘ನಾನೂ ಗೆಜ್ಜೆ ಕಟ್ಬೇಕು. ಕಟ್ರಿ’ ಎಂದು ಅಲವತ್ತುಕೊಂಡೆ. ‘ಹಾಗೆಲ್ಲ ಕಟ್ಬಾರ್ದವ್ವಾ, ದೇವ್ರಿಗೆ ಪೂಜೆ ಮಾಡಿ ಕಟ್ಟೋದು ಗೊತ್ತೇನು?’ ಎಂದು ಸುಮ್ಮನಿರಿಸಲು ನೋಡಿದರು. ಬಿಡುವವಳಲ್ಲ ನಾನು, ‘ಹಾಂ, ನಾನೂ ಪೂಜೆ ಮಾಡ್ತೇನಿ. ಕಟ್ರಲಾ’ ಎನ್ನುತ್ತಿದ್ದೆ. ನನ್ನ ಚಾಲಾಕಿತನ ಕಂಡು ನಕ್ಕು, ತಲೆ ಬಡಿದುಕೊಂಡು, ‘ನಿಮ್ಮವ್ವ ಬಿಟ್ಟಾಳ ನಮ್ಮನ್ನ, ಕಸಬರಿಕಿ ತಗೊಂಡು ಓಡ್ಸ್ಕೋತಾ ಬರ್ತಾರ’ ಎಂದು ತಮಾಷೆ ಮಾಡಿಬಿಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ