Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ರಾಗಿಕಾಳು ಕವನ ಸಂಕಲನ ಕುರಿತು ತಾರಿಣಿ ಶುಭದಾಯಿನಿ ಮಾತುಗಳು

ರಮೇಶಬಾಬು  ಕವನಗಳಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ. ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.
ಚೀಮನಹಳ್ಳಿ ರಮೇಶಬಾಬು ಬರೆದ ‘ರಾಗಿಕಾಳು’ ಹೊಸ ಕವನ ಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮಾತುಗಳು

Read More

ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

ಜಲ್ಲಿಕಟ್ಟು ಬೇರೆ ಕ್ರೀಡೆಗಳಿಗಿಂತ ಹೇಗೆ ವಿಭಿನ್ನವಾದದ್ದು ಎಂದು ಕೇಳಿದರೆ ಅದಕ್ಕೊಂದು ಉತ್ತರವಿದೆ. ಬೇರೆ ಆಟಗಳಲ್ಲಿ ಆಡುವ ಇಬ್ಬರೂ ಆಟಗಾರರಿಗೂ ಇದು ಆಟವೆಂದು ತಿಳಿದಿರುತ್ತದೆ. ಆದರೆ ಜಲ್ಲಿಕಟ್ಟುವಿನಲ್ಲಿ ಹಾಗಲ್ಲ. ಮನುಷ್ಯನಿಗೆ ಮಾತ್ರ ಇದು ಆಟ. ಮೃಗಕ್ಕೆ ಅದು ಗೊತ್ತಿಲ್ಲ. ಆಟವೆಂದು ತಿಳಿಯದ ಮೃಗವನ್ನು ಅಡಗಿಸಲು ಮನುಷ್ಯನಿಗೆ ಸಾಕಷ್ಟು ಯುಕ್ತಿಗಳಿವೆ. ಮೃಗವು ಅದನ್ನೆಲ್ಲಾ ಮೀರಿ ಆತನಿಂದ ತಪ್ಪಿಸಿಕೊಳ್ಳಬೇಕು. ಅದರ ಕೆಲವು ಅಂಶಗಳು ವಾಡಿವಾಸಲ್ ನಲ್ಲಿ ವಿವರವಾಗಿಯೇ ಬರೆಯಲಾಗಿದೆ. ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ಮೃಗತ್ವವನ್ನು ತೋರುವ ಕೃತಿಯಾಗಿದೆ ಈ ವಾಡಿವಾಸಲ್.
ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

Read More

ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

“ಮಲ್ಲಿಗೆ ಬ್ರಹ್ಮಕಮಲಗಳು
ಬಿರಿದುನಿಂತಿವೆ.
ಮಿಣುಕು ಹುಳಕೂ
ಮೈತುಂಬ ಬಂಗಾರ,
ಎಷ್ಟು ಹೊಳೆದರೂ ಸಾಲ.
ಅಪ್ಪ ಮಾಡಿದ್ದಲ್ಲವೇ?”- ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ

Read More

ಎಸ್.‌ ದಿವಾಕರ್‌ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ.
ಎಸ್.‌ ದಿವಾಕರ್‌ ಬರೆದ ವಿಧಾನಸಭೆಯಲ್ಲೊಂದು ಹಕ್ಕಿ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ