Advertisement

ರೇಣುಕಾ ನಿಡಗುಂದಿ

ಪ್ರೀತಿ, ಕ್ರಾಂತಿ, ಸಾಹಿತ್ಯಕ್ಕೆ ಅಂತಃಕರಣವೇ ಅಂತರ್ಜಲ

ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.
ನಾಗರೇಖಾ ಗಾಂವಕರ ಹೊಸ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಕ್ಕೆ ಶ್ರೀಧರ ಬಳಗಾರ ಬರೆದ ಮುನ್ನುಡಿ

Read More

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ದೇವದಾಸ ಕಳಸದ ಕತೆ

ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಡಾ. ದೇವದಾಸ ಕಳಸದ ಬರೆದ ಕತೆ

Read More

ಕನ್ನಡ ಕಾವ್ಯ ಮಾಲೆಯ ಕುಸುಮ: ಜೋಳದ ಝೋಕ್

“ಒಳ್ಳೆಯ ಮುತ್ತಿನ ಚೆಂಡಂತೆ ಮೋರಿ
ಬೆಳ್ಳಗೆ ಬೆಳಗುವ ಕಾಂತಿಯ ಬೀರಿ
ತೆಳ್ಳಗೆ ಹಸುರಿನ ಮೈಯದು ತೋರಿ
ಚೆಲುವಾದ ಕಳೆಯೇರಿ ವಲಿಯುವೆ ಭಾರಿ ॥೨॥”- ಜೋ. ದೊಡ್ಡನಗೌಡ  ಅವರು ಬರೆದ ಜೋಳದ ಝೋಕ್ ಕವನ  ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ಎ.ಎನ್.‌ ಪ್ರಸನ್ನ “ಅಲೆಗಳು” ಕಾದಂಬರಿಗೆ ಎಂ. ಎಸ್ . ಆಶಾದೇವಿ ಮುನ್ನುಡಿ

ಇಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ.
ಎ.ಎನ್. ಪ್ರಸನ್ನ ಹೊಸ ಕಾದಂಬರಿ “ಅಲೆಗಳು” ಗೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ