Advertisement

ಎಚ್. ಗೋಪಾಲಕೃಷ್ಣ

ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು. ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್‌ ಬರಹ

Read More

ನೆನಪುಗಳಿಗೆ ಜೀವ ತುಂಬುವ ಬರಹ: ಸ್ಮಿತಾ ಅಮೃತರಾಜ್ ಬರಹ

ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ

Read More

ವಯಸ್ಸೆಷ್ಟು ಎಂಬ ಪ್ರಶ್ನೆಯ ಪೂರ್ವಾಪರ

ನನ್ನ ಶಿಕ್ಷಕಿ ಗೆಳತಿಯೊಬ್ಬಳಿದ್ದಾಳೆ. ಅವಳಿಗೆ ವಯಸ್ಸು ಐವತ್ತು ದಾಟಿದರೂ ಇನ್ನೂ ಮೂವತ್ತರ ಆಚೆಯೀಚೆಯಂತೆ ಕಾಣುತ್ತಾಳೆ. ನಾವು ಸಿಕ್ಕಾಗಲೆಲ್ಲಾ ಅವಳನ್ನು ಪೀಡಿಸೋದು ನಿನ್ನ ಸೌಂದರ್ಯದ ರಹಸ್ಯ ಏನು? ಅಂತ. ಬಹುಶಃ ಇದು ಅವಳಿಗೆ ಮಾಮೂಲಿ ಪ್ರಶ್ನೆಯಾಗಿರಬಹುದು. ಅವಳು ಅಷ್ಟೇ ಅದನ್ನು ಸಹಜವಾಗಿ ಕೇಳಿ ನಕ್ಕು ಸುಮ್ಮನಾಗುತ್ತಿದ್ದಳೇ ವಿನಃ ತನ್ನ ವಯಸ್ಸನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ನಾವು ಬಿಡದೇ ಯೋಗ ಮಾಡುತ್ತೀಯ?”

Read More

ಚೌಕಟ್ಟಿನೊಳಗೆ ಕೂತ ಒಂದು ಊರಿನ ಚಿತ್ರ

ಒಂಟಿ ಪಾಲದಲ್ಲಿ, ಒಂಟಿ ಕೈತಾಂಗ ಹಿಡಿದು ದೇವರ ದಯೆಯಿಂದ ಹಳ್ಳ ಪಾಲಾಗದೆ ಇಲ್ಲಿ ತನಕ ಬಂದದ್ದೇ ವಿಶೇಷ ಅಂತ ನೆನೆದುಕೊಳ್ಳುವ ಈ ಹೊತ್ತಿನಲ್ಲಿ ಚೆಂದದ ಸೇತುವೆಯೊಂದು ನಿರ್ಮಾಣ ಆಗಿತ್ತು. ಭಯವಿಲ್ಲದೆಯೇ ಬಗ್ಗಿ ಪ್ರತಿಬಿಂಬ ನೋಡಬಹುದಿತ್ತು. ಆದರೆ ಆ ಪಾಲದ ಆಚೆ ಈಚೆ ಇದ್ದ ದೊಡ್ಡ ದೊಡ್ಡ ಮರಗಳು ಯಾಕೋ ಕಾಣೆಯಾಗಿದ್ದವು. ಆ ಎರಡು ಮರದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಿಂಡು ಗಿಳಿಗಳು, ಚೋರೆ ಹಕ್ಕಿಗಳು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ