Advertisement

Category: ಅಂಕಣ

ಆ ರಿಮೋಟು ನಮ್ಮ ಕೈಯಲ್ಲೇ ಇದೆ…: ವಿನಾಯಕ ಅರಳಸುರಳಿ ಅಂಕಣ

ಅದೇನೋ ಅಸಹನೆ… ಈ ಸಮಾಜದ ಮೇಲೆ. ಜನರ ಮೇಲೆ. ಸುತ್ತಲಿನವರ ಮೇಲೆ. ಕೊನೆಗೆ ನನ್ನ ಮೇಲೆಯೂ. ಇವೆಲ್ಲದರ ಮೂಲ ಎಲ್ಲೆಂದು ನೋಡುತ್ತ ಹೋದಂತೆ ಬಂದು ತಲುಪಿದ್ದು ದಿನದ ಕೆಲವೇ ಕೆಲವು ಕ್ಷಣಗಳ ಬಿಡುವಿನಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾದ ಎದುರು. ನೋಡುವ ಎಂದು ಅದರಲ್ಲಿನ ಜಾಳನ್ನೆಲ್ಲ ‘ನಾಟ್ ಇಂಟರೆಸ್ಟೆಡ್’ ಎಂದು ಬದಿಗೆ ಸರಿಸುತ್ತ ಬಂದೆ.‌ ಕಮೆಂಟು ಸೆಕ್ಷನ್‌ನ‌ ಬಾಗಿಲಿನ ಹಿಡಿಕೆಗೆ ಕೈ ತಗುಲಿಸಲೇ ಇಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಎರಡನೆಯದಕ್ಕೆ ನೆನಪು ನೂರೆಂಟು!: ಸುಕನ್ಯಾ ಕನಾರಳ್ಳಿ ಅಂಕಣ

ಮೊದಲನೆಯದಕ್ಕೆ ಬಾಯಿರುಚಿ ಅಂತೇನೂ ಇರಲಿಲ್ಲ. ಎರಡನೆದು ಮಹಾ ದೋಸೆಪ್ರಿಯೆ. ಮನೆಪಾಠದ ಮೇಷ್ಟ್ರು ಅಟ್ಟದ ಮೇಲೆ ದೊಡ್ಡ ಕುಟುಂಬದ ಅಷ್ಟೂ ಮಕ್ಕಳಿಗೆ ಪಾಠ ಹೇಳುತ್ತಿದ್ದರೆ, ಎರಡನೆದು ಕೆಳಗಿನ ಅಡಿಗೆ ಮನೆಯಿಂದ ಚೋಂಯ್ ಶಬ್ದ ಕೇಳಿಸಿದ್ದೇ ಎಷ್ಟು ದೋಸೆಗಳು ಕಾವಲಿ ಮೇಲೆ ಬಿದ್ದವು ಅಂತ ಮನಸ್ಸಿನಲ್ಲೇ ಎಣಿಸಿಕೊಂಡಿತ್ತು. ಪಾಠವೆಲ್ಲ ಮುಗಿದು ಮೇಷ್ಟ್ರು ಹೋದ ಮೇಲೆ ಎರಡನೆದು ದಡಬಡ ಅಟ್ಟದ ಮೆಟ್ಟಿಲು ಇಳಿದು ಹೋದರೆ ಅಡಿಗೆಮನೆಯಲ್ಲಿ ದೋಸೆ ಕಾವಲಿ ಎಲ್ಲೋ ಮಿಣ್ಣಗೆ ಕೂತಿದ್ದು ಕಂಡು ಹೊ ಎಂದು ಅಳಹತ್ತಿತಲ್ಲ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ

ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೊಂದನೆಯ ಬರಹ

Read More

ಶೆರ್ಲಿನ್ ಮಿಠಾಯಿ ಮನೆ; ಒನ್ ಅವರ್ ಬ್ಯುಸಿನೆಸ್ ಶಾಪ್: ಸುಮಾವೀಣಾ ಅಂಕಣ

ಶೆರ್ಲಿನ್ ಮಿಠಾಯಿ ಮನೆಯ ತಾತ ಟಾಕು ಠೀಕಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದರು. ವ್ಯವಹಾರವನ್ನೂ ಪಕ್ಕಾ ಮಾಡುತ್ತಿದ್ದರು. ಐದು ಪೈಸೆಯನ್ನು ಕೊಡಬೇಕಾಗಿದ್ದರೂ ಮುಖ ನೆನಪಿನಲ್ಲಿಟ್ಟುಕೊಂಡು ಕೊಟ್ಟ ಅಂತೆಯೇ ವಸೂಲಿ ಮಾಡಿದ ಉದಾಹರಣೆಗಳು ಇವೆ. ಟೆಸ್ಟುಗಳಲ್ಲಿ ಔಟ್ ಆಫ್ ಬಂದಾಗ ಎದುರಾಳಿಗಳಿಗಿಂತ ಅರ್ಧ ಅಂಕ ಹೆಚ್ಚಾಗಿ ಬಂದರೂ ಆ ದಿನ ಶೆರ್ಲಿನ್ ಮಿಠಾಯಿ ಮನೆಯಲ್ಲಿ ಟೀನ್ ಏಜರುಗಳ ಟ್ರೀಟ್. ಟೀನೇಜಿನ ರಸಮಯ ಸಂಗತಿಗಳನ್ನು ಹಂಚಿಕೊಳ್ಳುವ ರಸಮಯ ಪಾಯಿಂಟ್ ಸರ್ಲಿನ ಮಿಠಾಯಿ ಮನೆ ಆಗಿತ್ತು.
ಸುಮಾವೀಣಾ ಹೊಸ ಅಂಕಣ “ನುಡಿನಲಿವು”

Read More

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೆರಡನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ