Advertisement

Category: ಅಂಕಣ

ಕುದ್ರಿ ಕುದ್ರಿನ…ಕತ್ತಿ ಕತ್ತಿನ….!

ಬೀಜಗಣಿತವನ್ನು ಕಲಿಸುತ್ತಿದ್ದಾಗ ಮೇಷ್ಟ್ರು 4x ಗೆ 3y ಸೇರಿಸಿದರೆ ಎಷ್ಟಾಗುತ್ತದೆ ಎನ್ನುವುದನ್ನು ಅವರೆಷ್ಟು ಬಾರಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ನಿಷ್ಕ್ರಿಯಗೊಂಡಂತಿದ್ದ ನಮ್ಮ ಮೆದುಳೊಳಗೆ ಇಳಿಯದೆ ನಮ್ಮೆಲ್ಲರ ಉತ್ತರ ‘ಏಳು’ ಎಂದೇ ಇರುತ್ತಿತ್ತು.  ಅವರಿಗೆ ಕೊನೆ ಕೊನೆಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ಭಿನ್ನವಾದ ಉದಾಹರಣೆಯನ್ನು ನೀಡುತ್ತಾ “ಹೆಲೊ ಜೆಂಟಲ್‌ಮೆನ್ಸ್, ನಾಲ್ಕು ಕುದ್ರಿಗಳೊಳಗ ಮೂರು ಕತ್ತಿಗಳನ್ನ ಕುಡಿಸಿದ್ರ ಎಷ್ಟ್ ಆಗ್ತೆತಿ” ಅಂದಾಗಲೂ ನಾವು ಏಳು ಅಂತಲೇ ಒದರಿಬಿಡುತ್ತಿದ್ದೆವು. ನಮ್ಮ ದಡ್ಡತನಕ್ಕೆ ಅವರು ಹಣಿ ಹಣಿ ಜಜ್ಜಿಕೊಂಡು ಮರುಕಪಟ್ಟು “ನಾಲ್ಕು ಕುದ್ರಿಗೆ ಮೂರು ಕತ್ತಿ ಸೇರಿದ್ರ ಏಳು ಆಗಲ್ಲ ಕಣ್ರಲೇ, ಕುದ್ರಿ ಕುದ್ರಿನ… ಕತ್ತಿ ಕತ್ತಿನ…. ಅವು ಯಾವತ್ತು ಒಂದ ಅಲ್ಲ ಎನ್ನುತ್ತಿದ್ದರು. ʻತಳಕಲ್‌ ಡೈರಿʼಯಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್‌ ತಳಕಲ್‌

Read More

ಸಾವೇ ಇಲ್ಲದ ಗಿಡ ಮತ್ತು ಹ್ಯುಮಸ್ಸು

ಆ ಮಣ್ಣಿನ ದಾರಿಯ ಆಚೀಚೆ ಬೇರೆಯವರ ಹೊಲಗಳು ಇವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಅಲ್ಲಿರ್ಪ ಗುತ್ತೆಪ್ಪ, ದುರ್ಗಪ್ಪ, ಬಸಪ್ಪ, ಮಾಲತೇಶ ಹೀಗೇ ಒಬ್ಬೊಬ್ಬರೇ ಕ್ರಮೇಣ ಪರಿಚಯವಾದರು. ನಡೆದುಕೊಂಡು ಹೋದರೆ ಇದೊಂದು ಲಾಭ ಅಲ್ಲವೇ? ಅಲ್ಲಿನ ಬಹಳಷ್ಟು ರೈತರು ಬೆಳೆಯುವ ಬೆಳೆಗಳು ಒಂದೋ ಭತ್ತ, ಮುಸುಕಿನ ಜೋಳ ಇಲ್ಲವೆ ಶುಂಠಿ. ಅಡಿಕೆಗೆ ಬೆಲೆ ಬರುತ್ತಿದೆ ಅಂತ ಕೆಲವರು ಇತ್ತೀಚಿಗೆ ತಮ್ಮ ಗದ್ದೆಯನ್ನು ತೋಟವನ್ನಾಗಿ ಮಾಡುತ್ತಿದ್ದರು. ಆದರೆ ಯಾರೂ ಕೂಡ ಅಲ್ಲಿ ಸಮಗ್ರ ಕೃಷಿ ಮಾಡಿರಲಿಲ್ಲ. ಎಲ್ಲರದೂ ಒಂದೇ ಬೆಳೆ. ಬೆಲೆ ಬಂದರೆ ಲಾಟರಿ ಇಲ್ಲವಾದರೆ ದೇವರೇ ಗತಿ ರೀ!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ

Read More

ಮಡಿವಂತಿಕೆಯ ರಂಗಸ್ಥಳದಲ್ಲಿ ಹೊಸ ಪ್ರಸಂಗಗಳ ಗ್ರಹಿಕೆ

ಹೊಸ ಪ್ರಸಂಗಗಳ ಬಗ್ಗೆ ಸಾಮಾನ್ಯವಾಗಿ ಒಂದು ಸೀಮಿತ ಗ್ರಹಿಕೆಯಿರುತ್ತದೆ. ಯಕ್ಷಗಾನವೆಂದರೆ ಅದು ಹಳೆಯ ಕಲೆ, ಅದಕ್ಕೆ ನೂರಾರು ವರ್ಷಗಳ ಪರಂಪರೆಯಿದೆ. ಅದು ಪುರಾಣ ಕತೆಗಳ ಮೌಲ್ಯ ಪ್ರಸಾರಕ್ಕಾಗಿದೆ, ನಮ್ಮ ಜೀವನಕ್ಕೆ ಬೇಕಾಗುವ ಮೌಲ್ಯವೇ ಪುರಾಣಗಳಲ್ಲಿವೆ ಮತ್ತು ಹಳೆಯದೆಲ್ಲವನ್ನು ರಕ್ಷಿಸಬೇಕು ಎನ್ನುವ ನಂಬಿಕೆಯಿಂದಾಗಿ. ಜೊತೆಗೆ ಅದೊಂದು ಗಂಭೀರವಾದ ಕಲೆ ಎನ್ನುವ ದೃಷ್ಟಿಕೋನವೂ ಸೇರಿಕೊಂಡಿದೆ. ಗಂಭೀರವೆಂದರೆ ರಂಜನೆಯಿಲ್ಲದ್ದು ಅನ್ನುವುದು ಒಮ್ಮೊಮ್ಮೆ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಇವೆಲ್ಲ ನಂಬಿಕೆಗಳು ವಸಾಹತಿನ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯತೆಯ ಕಲ್ಪನೆಯೊಟ್ಟಿಗೆ ಬಂದದ್ದೆಂದು ಕಾಣುತ್ತದೆ. ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ. 

Read More

ಕಷ್ಟವನ್ನೇ ಬದುಕಿನ ಗುರುವೆನ್ನಬಹುದೇ?

ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಅಂಕಣ “ಲೋಕ ಏಕಾಂತ”

Read More

ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳಂತ ಕನಸು

ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ