Advertisement

Category: ಅಂಕಣ

ಖಾಲಿ ಕುರ್ಚಿಗಳ ಕ್ರಿಸ್ಮಸ್!: ಯೋಗೀಂದ್ರ ಮರವಂತೆ ಅಂಕಣ

“ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಅರವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಕೋವಿಡ್ ಡೈರಿಯೊಳಗಿನ ಸರ್ವವಿಧಿತ ಕಠೋರ ಲೋಕಸತ್ಯ. ಈ ಇವರೆಲ್ಲರೂ ಕೊರೊನ ಕಾರಣಕ್ಕೆ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಾಯಾಗಿ ಹಬ್ಬಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶ ಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು…”

Read More

“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ..”

Read More

ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ

“ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ….”

Read More

ತಂತ್ರಜ್ಞಾನದ ವ್ಯಾಖ್ಯೆಗಳು: ಕಮಲಾಕರ ಕಡವೆ ಬರೆಯುವ ಬೆರಗು ಮತ್ತು ಭೀತಿ ಅಂಕಣ- 4:

“ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಈ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ.”

Read More

ಕಾಲದಲ್ಲಿ ಲೀನವಾಗುವುದೆಂದರೆ….: ಶೇಷಾದ್ರಿ ಗಂಜೂರು ಅಂಕಣ

“ಮ್ಯಾಕ್ಸ್‌ವೆಲ್‌ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್‌ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ