Advertisement

Category: ದಿನದ ಅಗ್ರ ಬರಹ

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

Read More

ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ”

ಟೀನಾ ಒಂದು ದಿನ ರೋಬಿಣಿಯನ್ನು ಕರೆದು ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಕೇಳಿದಳು. ರೋಬಿಣಿ ಕಡ್ಡಿತುಂಡರಿಸಿದಂತೆ ನಿರಾಕರಿಸಿದಳು. ರೋಬಿಣಿಯನ್ನು ಮುಂದಿನ ಬಾರಿ ಬದಲಾಯಿಸುವಾಗ ಮನೆ ಕೆಲಸಗಳನ್ನು ಮಾಡುವಂತಹ ಪ್ರೋಗ್ರಾಮ್ ಅಳವಡಿಸಲು ಬಿಎಂಐ ಕಂಪನಿಗೆ ಹೇಳಬೇಕು ಎಂದುಕೊಂಡಳು ಟೀನಾ. ಅದು ಸಾಧ್ಯವಿಲ್ಲವೆಂದು ಜಗ ಟೀನಾಗೆ ತಿಳಿಸಿ ಹೇಳಿದ. ಕಂಪನಿಯ‌ ಪ್ಯಾಕೇಜ್ ನಿಬಂಧದಂತೆ ಹಾಗೂ ರೋಬಾಟ್ಸ್ ರೈಟ್ಸ್ ಪ್ರಕಾರ, ಮಗುವಂತೆ ಸಾಕಲು ಪಡೆದ ರೋಬಾಟ್‌ಗಳಿಂದ ಮನೆಕೆಲಸಗಳನ್ನು ಮಾಡಿಸಲು ಸಾಧ್ಯವಿರಲಿಲ್ಲ.
ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ” ನಿಮ್ಮ ಓದಿಗೆ

Read More

ಇಲ್ಲಿ ಎಲ್ಲವೂ ಸರಕೇ!: ಸುಕನ್ಯಾ ಕನಾರಳ್ಳಿ ಅಂಕಣ

ಕೆಲವೇ ನಿಮಿಷಗಳಲ್ಲಿ ಕಳ್ಳತನದಿಂದ ಅವರನ್ನು ಒಳಗೆ ಕರೆದುಕೊಂಡು ಒಳಗಿಂದ ಬಾಗಿಲು ಜಡಿದುಕೊಂಡು ಇಡೀ ಕಟ್ಟಡಕ್ಕೆ ಆಧಾರವಾಗಿರುವ ಗೋಡೆಯ ಭಾಗವನ್ನು ಉರುಳಿಸಿದಳು. ಮುಂದಿನದೆಲ್ಲ ರಣರಂಪ. ಅದರ ಕೆಳಗೆ ಮತ್ತು ಮೇಲೆ ಇದ್ದ ಫ್ಲಾಟಿನವರು ಬಂದು ಏನು ಏನು ಎಂದು ನೋಡುವ ಹೊತ್ತಿಗೆ ಗೋಡೆ ಉರುಳಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನಾಲ್ಕನೆಯ ಬರಹ

Read More

ಭಕ್ತೆ-ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಪ್ರಾಪಂಚಿಕ ಮದುವೆಗೆ ಬೆಚ್ಚಿ ಬೀಳುತ್ತಿದ್ದ ನಿದರ್ಶನಗಳಲ್ಲಿ ಸುಮಾರು ಹದಿನೇಳನೆಯ ಶತಮಾನದ ಕೇರಳದಲ್ಲಿದ್ದ ಅನುಭಾವಿನಿ ನಂಗ ಪೆಣ್ಣು ಒಂದು ಉತ್ತಮ ಉದಾಹರಣೆ. ಕೊಚ್ಚಿನ್ ರಾಜಾಸ್ಥಾನವಾದ ತ್ರಿಪ್ಪುನಿತ್ತುರದಲ್ಲಿದ್ದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ ಈಕೆಯ ಮದುವೆಯ ದಿನ ಭರ್ಜರಿ ಮೆರವಣಿಗೆಯಲ್ಲಿ ವಧುವಿನ ಮನೆಗೆ ಬರುತ್ತಿದ್ದ ವರನಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ತ್ರಿಪ್ಪುನಿತ್ತುರದಲ್ಲಿದ್ದ ದೇವಸ್ಥಾನದ ವಿಷ್ಣುವಿನಲ್ಲಿ ಲೀನವಾಗಿದ್ದಳು. ಈಗಲೂ ನಂಗ ಪೆಣ್ಣು ಹಬ್ಬದ ದಿನದಂದು ಮೂರ್ತಿಯನ್ನು ವರನಾಗಿ ಮೆರವಣಿಗೆಯಲ್ಲಿ ಅವಳ ತಂದೆಯ ಮನೆಗೆ ಹೊತ್ತೊಯ್ಯಲಾಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಆರನೆಯ ಬರಹ

Read More

ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಶಿ ಸರಣಿ

ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ. ಹಿಂಭಾಗ ಗುಮ್ಮಟೆಯಂತೆ ಇರುತ್ತದೆ. ಅದರ ಸುಗಂಧ ಅದ್ಭುತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೆರಡನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ