Advertisement

Category: ದಿನದ ಪುಸ್ತಕ

ವ್ಯಾಸರಾವ್‌ ನಿಂಜೂರ್‌ ಆತ್ಮಕಥನದ ಪುಟಗಳು

ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು.
ವ್ಯಾಸರಾವ್‌ ನಿಂಜೂರ್‌ ಅವರ ಆತ್ಮಕಥನ “ಎಳೆದ ತೇರು” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

`ಮಣಿಬಾಲೆʼ ಕೃತಿಯ ಒಂದೆರಡು ಪುಟಗಳು

ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ

Read More

ಸಂತೆಯೊಳಗಣ ಮೌನಕ್ಕೆ ಶರಣಾಗುತ್ತ…

ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ.
ಚನ್ನಬಸಪ್ಪ ಆಸ್ಪರಿಯವರ “ಸಂತೆಯೊಳಗಣ ಮೌನ” ಕವನ ಸಂಕಲನದ ಕುರಿತು ನಾದ ಮಣಿನಾಲ್ಕೂರು ಬರಹ

Read More

ಇರುವಿಕೆ ಮತ್ತು ಆಗುವಿಕೆ

ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿ‌ಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ

Read More

ಬಾಳಿನ ಸಂತೆಯಲ್ಲಿ ಗಜಲ್ ಧ್ಯಾನ..

ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್‌ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ