Advertisement

Category: ದಿನದ ಪುಸ್ತಕ

ಚತುರೋಕ್ತಿಯಿಂದ ಸಹೃದಯತೆಯ ಒಡಲನ್ನು ತೆರೆದಿಟ್ಟ ವ್ಯಕ್ತಿಚಿತ್ರಣ

ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಈ ಪುಸ್ತಕದಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ.
ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಹೂ ನೋಡಿ ಗಿಡದ ಪರೀಕ್ಷೆ

ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.
ಆಶಾ ಜಗದೀಶ್‌ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ…

ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ.
ಕೆ. ನಲ್ಲತಂಬಿ ಅನುವಾದಿಸಿದ ಮಹಾತ್ಮನ ಬದುಕಿನ ಕೆಲವು ಆಯ್ದ ಕತೆಗಳ ಸಂಕಲನ “ಮತ್ತೊಂದು ರಾತ್ರಿ” ಕೃತಿಗೆ ಕೆ.ಪಿ. ಸುರೇಶ ಬರೆದ ಮುನ್ನುಡಿ

Read More

ದಟ್ಟ ಅನುಭವಗಳ ಬೆನ್ನ ಹಿಡಿದು 

ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೇವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.
ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.
ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿ

Read More

ಒಲೆ ಬದಲಾದರೂ ಉರಿ ಬದಲಾಗದು!

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ. ಅವಳಿಗೆ ಗಂಡ, ಮಕ್ಕಳಿಗೆ ಮಾತ್ರ ಅಲ್ಲ ತೋಟದ ಕೆಲಸಕ್ಕೆ ಬರುವ ಕಾರ್ಮಿಕರಿಗೂ ಅಡುಗೆ ಮಾಡಬೇಕಾದ ಪರಿಸ್ಥಿತಿ. ನಾನು ನಾಳೆ ಹೊರಗೆ ಹೋಗಲು ಇದೆಯೆಂದಾದರೆ ಇಂದೇ ರಾತ್ರಿ ಉಗಿಯಲ್ಲಿ ಬೇಯಿಸಿ ಮಾಡುವ ಪುಂಡಿ, ಕಡುಬು, ಪತ್ರೊಡೆಯಂತಹ ತಿಂಡಿಯನ್ನು ಮಾಡಿ ಇಡುತ್ತೇನೆ. ಯಾಕೆ ಹೀಗೆ? ಒಂದು ದಿನದ ಮಟ್ಟಿಗಾದರೂ ಅಡುಗೆ ಮನೆ ಹೊಣೆಯನ್ನು ಗಂಡಿಗೆ ಹೊತ್ತುಕೊಳ್ಳಲು ಆಗುವುದಿಲ್ಲವಾ?
ಸಹನಾ ಕಾಂತಬೈಲು ಅವರು ಬರೆದ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ