Advertisement

Category: ದಿನದ ಪುಸ್ತಕ

ಕಾಡುವ ನಿನ್ನೆಗಳು ಕಾಣದ ನಾಳೆಗಳ ನಡುವೆ…!

ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು.
ಪ್ರೊ.ಎಚ್.ಟಿ. ಪೋತೆಯವರ ಹೊಸ ಕಾದಂಬರಿ “ಮಹಾಬಿಂದು” ಇಂದ ಕೆಲವು ಪುಟಗಳು

Read More

ಒಂದೊಂದು ತಲೆಗೂ ಒಂದೊಂದು ಬೆಲೆ

ಈವರೆಗೂ ಅವರು ಇಂಟರ್‍ವ್ಯೂ ಪ್ಯಾನಲ್‍ಗಳಲ್ಲಿ ಕುಳಿತು ಸಂದರ್ಶನ ತೆಗೆದು ಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಕೊನೆಯ ಹಂತದ ಇಂಟರ್‍ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‍ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಸೀನಿಯರ್ ಮ್ಯಾನೇಜರ್‍ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‍ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್”
ಎಂ.ಆರ್. ದತ್ತಾತ್ರಿ ಅವರ “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಡುಂಡಿರಾಜ್ ಪುಸ್ತಕದ ಹನಿಗಳ ಕಂಪು

‘ಹನಿಗವನ ಅಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿನುಡಿ’ ಎಂಬ ಸಾಲುಗಳಂತೆ  ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‍ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ.  ಏನೇ ಆಗಲಿ, ಆಕಾರ ಸಾಧ್ಯವಾದಷ್ಟು ಚಿಕ್ಕದಾಗಿರುವುದು ಮುಖ್ಯ. ಚುಟುಕು ಕವಿ ಡುಂಡಿರಾಜ್‌ ಬರೆದ “ಹನಿಗವನ; ಏನು? ಏಕೆ? ಹೇಗೆ?” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಎ.ಎನ್.‌ ಪ್ರಸನ್ನ “ಅಲೆಗಳು” ಕಾದಂಬರಿಗೆ ಎಂ. ಎಸ್ . ಆಶಾದೇವಿ ಮುನ್ನುಡಿ

ಇಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ.
ಎ.ಎನ್. ಪ್ರಸನ್ನ ಹೊಸ ಕಾದಂಬರಿ “ಅಲೆಗಳು” ಗೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

Read More

ಎಂಬತ್ತರ ದಶಕದ ಮಹತ್ವದ ಸಾಹಿತ್ಯ

ವಿಮರ್ಶಾ ಕ್ಷೇತ್ರದಲ್ಲಿ ಕಣ್ಣನ್ನು ಸೆಳೆಯುವಂತಹ ಬೆಳವಣಿಗೆ ಆಗಿದೆ. ಸೃಜನಶೀಲ ಸಾಹಿತ್ಯದ ಹಿಂದೆಯೂ ಪ್ರಜ್ಞಾಪೂರ್ವಕ ಚಿಂತನೆ ಇರುವುದು ಅನಿವಾರ್ಯವಾದ ಯುಗದಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಷ್ಟೂ ಸೃಜನಶೀಲ ಸಾಹಿತ್ಯಕ್ಕೂ ಲಾಭ. ಜಿ.ಎಚ್. ನಾಯಕ, ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚನ್ನಿ, ಡಿ.ಆರ್. ನಾಗರಾಜ ಮೊದಲಾದವರ ವಿಮರ್ಶೆಯ ಬರಹಗಳನ್ನು ಓದಿದಾಗ ವಿಮರ್ಶೆಯ ಉಪಕರಣಗಳು ಎಷ್ಟು ಸೂಕ್ಷ್ಮವಾಗಿವೆ ಎನ್ನುವುದು ಸಂತೋಷವನ್ನುಂಟು ಮಾಡುತ್ತದೆ. ಹಲವೊಮ್ಮೆ ಈ ವಿಶ್ಲೇಷಣೆಯಲ್ಲಿ ಬೌದ್ಧಿಕ ಅಂಶ ತಾನೇತಾನಾಗಿ, ರಸಾ ಸ್ವಾದನೆ ಹಿಂದುಳಿಯುತ್ತಿದೆಯೋ ಎಂದು ಆತಂಕವಾಗುತ್ತದೆ.
ಪ್ರೊ. ಎಲ್.ಎಸ್. ಶೇಷಗಿರಿರಾವ್ ಬರೆದ “ಆಧುನಿಕ ಕನ್ನಡ ಸಾಹಿತ್ಯ” ಕೃತಿಯಿಂದ ಒಂದು ಲೇಖನ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ