Advertisement

Category: ದಿನದ ಪುಸ್ತಕ

ಒಲೆ ಬದಲಾದರೂ ಉರಿ ಬದಲಾಗದು!

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ. ಅವಳಿಗೆ ಗಂಡ, ಮಕ್ಕಳಿಗೆ ಮಾತ್ರ ಅಲ್ಲ ತೋಟದ ಕೆಲಸಕ್ಕೆ ಬರುವ ಕಾರ್ಮಿಕರಿಗೂ ಅಡುಗೆ ಮಾಡಬೇಕಾದ ಪರಿಸ್ಥಿತಿ. ನಾನು ನಾಳೆ ಹೊರಗೆ ಹೋಗಲು ಇದೆಯೆಂದಾದರೆ ಇಂದೇ ರಾತ್ರಿ ಉಗಿಯಲ್ಲಿ ಬೇಯಿಸಿ ಮಾಡುವ ಪುಂಡಿ, ಕಡುಬು, ಪತ್ರೊಡೆಯಂತಹ ತಿಂಡಿಯನ್ನು ಮಾಡಿ ಇಡುತ್ತೇನೆ. ಯಾಕೆ ಹೀಗೆ? ಒಂದು ದಿನದ ಮಟ್ಟಿಗಾದರೂ ಅಡುಗೆ ಮನೆ ಹೊಣೆಯನ್ನು ಗಂಡಿಗೆ ಹೊತ್ತುಕೊಳ್ಳಲು ಆಗುವುದಿಲ್ಲವಾ?
ಸಹನಾ ಕಾಂತಬೈಲು ಅವರು ಬರೆದ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ.

Read More

ಎಲ್ಲರವ…. ಈ ಲೆಬನಾನಿನವ…

ಗಿಬ್ರಾನ್‌ನಂತವರ ಬದುಕು ಉರಿವ ಮೇಣದ ಬತ್ತಿಯಂತೆ ಬೆಳಕನ್ನು ಕೊಡುತ್ತಲೇ ತನ್ನನ್ನು ತಾನು ಸುಟ್ಟುಕೊಳ್ಳುವ ನೋವನ್ನು ಒಡಲುಗೊಂಡಿರುವ ಜೀವನವಾಗಿದೆ. ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಅಪರೂಪದ ಅವಕಾಶವೆಂಬುದು ಗಿಬ್ರಾನನ ನಂಬಿಕೆಯಾಗಿರುವಂತಿದೆ. ಆತ ಬರೆದಿರುವ ಆದಿಮವೂ ನಿತ್ಯ ನೂತನವೂ ಆಗಿರುವ ಪ್ರಾಫೆಟ್‌ ಕಾವ್ಯದ ಕಲ್ಪನೆಯು ಆತನ ಹದಿನಾಲ್ಕನೇ ವಯಸ್ಸಿಗೆ ಆರಂಭವಾಯಿತು ಎಂಬ ಸಂಗತಿ ಮಹದ್‌ಅಚ್ಚರಿಯ ವಿಷಯವಾಗಿದೆ.
ಸಂಧ್ಯಾರಾಣಿ ಅನುವಾದಿಸಿರುವ ಬಾರ್ಬರಾ ಯಂಗ್‌ ಬರೆದ ಖಲಿಲ್‌ ಗಿಬ್ರಾನ್‌ ಕುರಿತ ಪುಸ್ತಕ “ಇವ ಲೆಬನಾನಿನವ”ಕ್ಕೆ ಕೆ.ವೈ. ನಾರಾಯಣಸ್ವಾಮಿ ಬರೆದ ಮುನ್ನುಡಿ

Read More

ಹೋರಿಕರುವಿನ ವಿದಾಯ ಪ್ರಸಂಗ

ಇಂದು ಬೇಸಾಯ ಮಾಡುವುದನ್ನು ಎಲ್ಲರೂ ನಿಲ್ಲಿಸಿದ್ದರಿಂದ ಹೋರಿ ಯಾರಿಗೂಬೇಡ. ಗದ್ದೆ ಮಾಡುವವರೂ ಯಂತ್ರಕ್ಕೆ ಶರಣಾಗಿದ್ದಾರೆ. ಗೊಬ್ಬರಕ್ಕಾಗಿ ಸಾಕುವುದೂ ವ್ಯರ್ಥ. ಏಕೆಂದರೆ, ಇರುವ ಹಸುಗಳ ಗೊಬ್ಬರವನ್ನೇ ತೆಗೆಯಲು ಕೂಲಿಯಾಳುಗಳ ಕೊರತೆ ಇದೆ. ಕೂಲಿಯವರು ಸಿಕ್ಕಿದರೂ ಸಂಬಳ ಕೊಡಲು ಪೂರೈಸಬೇಕಲ್ಲ? ವೆಚ್ಚ ಹೆಚ್ಚಾಗಿ ಉಳಿತಾಯ ಇಲ್ಲದ ಹೋರಿ ಸಾಕುವ ಕೆಲಸ ಯಾರಿಗೆ ಬೇಕು? ಎಲ್ಲ ಹೈನುಗಾರರ ಮನೆಗೆ ಹೋಗಿ ನೋಡಿದರೆ ಅಲ್ಲಿ ಹಸು ಮತ್ತು ಹೆಣ್ಣು ಕರುಗಳು ಮಾತ್ರ ಇರುತ್ತವೆ!  ಹಾಗಾದರೆ, ಅವರಲ್ಲಿ ಗಂಡು ಕರು ಹುಟ್ಟುವುದೇ ಇಲ್ಲವೇ? ಹುಟ್ಟಿದರೆ ಅವರು ಏನು ಮಾಡುತ್ತಾರೆ ? ಸಹನಾ ಕಾಂತಬೈಲು ಅವರು ಬರೆದ ಆನೆ ಸಾಕಲು ಹೊರಟವಳು ಪುಸ್ತಕದ  ಕೆಲವು ಅಧ್ಯಾಯಗಳು ಪ್ರತೀ ಮಂಗಳವಾರ ಪ್ರಕಟವಾಗಲಿದೆ. ಮೊದಲ ಅಧ್ಯಾಯ ಇಲ್ಲಿದೆ. 

Read More

ಕನ್ನಡದ ಕಣ್ಣಲ್ಲಿ ಅಮೆರಿಕನ್ ‘ಶೈಶವ’

ಅನುವಾದವೆಂದರೆ ಪದಗಳ ಅದಲಿ ಬದಲಿಯಲ್ಲ;  ಪದಶಃ  ಬದಲಾವಣೆಯಲ್ಲ ಕವಿತೆಯ ಬಾವವನ್ನು ಮುಕ್ಕಾಗಿಸದೆ ಅತ್ಯಂತ ಸೂಕ್ಷ್ಮವಾಗಿ  ಅಂದುಕೊಂಡ ಭಾಷೆಯಲ್ಲಿ ಹೇಳುವ ರೀತಿಯಾಗಿದೆ.   ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸುವುದು ನಿಜಕ್ಕೂ ಸವಾಲಿನ ಕೆಲಸ.  ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅನೇಕ ಕೃತಿಗಳು ಪ್ರವೇಶ ಪಡೆದಿವೆ.  ಇತ್ತೀಚೆಗೆ  ಅಮೆರಿಕನ್ ಕವಯತ್ರಿ ಎಮಿಲಿ ರಾಲ್ಫ್ ಗ್ರೋಶೆಲ್ಸ್ ಅವರ  ‘ಚೈಲ್ಡ್ ಹುಡ್’  ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮೈ. ಶ್ರೀ. ನಟರಾಜ್.  ‘ಶೈಶವ’ ಎನ್ನುವ  ಶೀರ್ಷಿಕೆಯ ಈ  ಕವನಸಂಕಲನದ ವಿಭಿನ್ನತೆಯನ್ನು ಗುರುತಿಸಿದ್ದಾರೆ ಲೇಖಕಿ ಸುಮಾವೀಣಾ.  ಮಕ್ಕಳ ಬಾಲ್ಯವನ್ನೇ ವಸ್ತುವಾಗಿಸಿಕೊಂಡು ಒಡಮೂಡಿದ ಕೃತಿಯ ಕುರಿತು ಅವರು ಬರೆದ ಪುಟ್ಟ ಬರಹವೊಂದು ಇಲ್ಲಿದೆ.

Read More

ಸುಖ ಸಂಸಾರಕ್ಕೆ ಸಾವಿರ ಸೂತ್ರ ಮತ್ತಷ್ಟು ಖಾಲಿ ಹಾಳೆಗಳು

ನೀ ಬಿಡು, ಅತ್ತೂ ಕರೆದೋ, ಪೆಚ್ಚು ಮೋರೆ ಹಾಕಿ ಕುಳಿತುಕೊಂಡೋ, ಸಲ್ಲದ ವರ ಬಂದಾಗ ಅಪ್ಪನ ಮುಂದೆ ಸೊಲ್ಲೆತ್ತದೆ, ಅವ್ವನ ಕಿವಿಯೂದಿ ನಿನ್ನಿಚ್ಛೆಯ ಹುಡುಗ ಸಿಕ್ಕಾಗ ಗ್ರೀನ್ ಸಿಗ್ನಲ್ ತೋರಿದವಳು. ಇದು ಬಲ್ಲಿದರ ಕಾರು ದಾರಿಯ ರಸ್ತೆಯಲ್ಲ, ಬಡವರ ಬಂಡೀ ರಸ್ತೆ ಎಂದರಿತರೂ ಬಂಡೀ ನಡೆಸುವವನ ಯೋಗ್ಯತೆ ಅರಿತು ಹತ್ತಿ ಕುಳಿತವಳು. ಹಾಗಾಗಿ ಉರುಳುವ ಬಂಡಿಯ ಗಾಲಿಗೆ ಕೀಲದ ಕಡೆಗೇ ನಿನ್ನ ಗಮನವಿತ್ತು. ಎಂಥ ತಗ್ಗು ದಿಣ್ಣೆಗಳು ಬಂದರೂ, ಏರು ಇಳುವುಗಳು ಬಂದರೂ ನಿನ್ನವನ ತೋಳಿನ ಶಕ್ತಿಯಾಗಿ ಸಾಗಿದೆ.
ಡಾ. ನಿಂಗು ಸೊಲಗಿ ಬರೆದ “ನನ್ನಿನ್ನ ನಗಿ ನೋಡಿ” ಪುಸ್ತಕದ ಒಂದು ಪತ್ರ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ