Advertisement

Category: ದಿನದ ಪುಸ್ತಕ

ವಿಶಿಷ್ಟ ಅನುಭವಗಳ ಮೊತ್ತ ‘ಅಂಗೈ ಅಗಲದ ಆಕಾಶ’

ಇಂಥ ಸ್ಮೃತಿಚಿತ್ರಗಳಲ್ಲಿ ಸತ್ಯದ ಪರಿಧಿಯಿಂದ ಹೊರಹೋಗಲು ಸಾಧ್ಯವಿಲ್ಲ, ಅಂದರೆ ಶುದ್ಧ ನೆನಪುಗಳು ಯಾವಾಗಲೂ ವಾಸ್ತವದಲ್ಲಿ ಜೀವಿಸಿರುತ್ತವೆ ಹಾಗಾಗಿ ಬರೆಯುವಾಗ ನಿರೂಪಕಿಯೂ ವಾಸ್ತವದಲ್ಲೇ ಜೀವಿಸಿರಬೇಕಾಗುತ್ತದೆ, ಕಲ್ಪನೆ ಇಲ್ಲಿ ಕೆಲಸ ಮಾಡದು. ಆಗ ಎಲ್ಲ ಕೋನದಿಂದ ನಿಂತು ನೋಡುವ ಆಯಾಮಗಳು ಕಳೆದುಹೋಗುತ್ತವೆ. ಆದರೆ ಸುಮಿತ್ರಾ ಅವರು ಕೆಲವು ಘಟನೆಗಳನ್ನು ಇಂದಿನ ಸಂದರ್ಭದಲ್ಲಿಟ್ಟು ತೂಗಿ ನೋಡುತ್ತಾರೆ. ಹಾಗಾಗಿ ಸನ್ನಿವೇಶಗಳಿಗೊಂದು ಬೇರೆಯದೇ ಆದ ತೂಕ ಪ್ರಾಪ್ತವಾಗುತ್ತದೆ.
ಡಾ. ಎಲ್. ಸಿ. ಸುಮಿತ್ರಾ ಅವರ ಸ್ಮೃತಿ ಚಿತ್ರಗಳ ಸಂಕಲನ “ಅಂಗೈ ಅಗಲದ ಆಕಾಶ”ದ ಕುರಿತು ಲೇಖಕಿ ಸುನಂದಾ ಕಡಮೆ ಬರಹ

Read More

ಅಬ್ದುಲ್ ರಶೀದ್ ಕೃತಿಗೆ ಭಾರತಿ ಬಿ.ವಿ. ಬರೆದ ಮುನ್ನುಡಿ

“ರಶೀದ್ ಬರಹಗಳನ್ನು ಮೊದಲಲ್ಲಿ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು ‘ಅದು ಹೇಗೆ ಇವರ ಬದುಕಿನಲ್ಲಿ ನನಗೆ ಅಸಾಧ್ಯವಾದ ಏನೆಲ್ಲ ಆಗುತ್ತದಲ್ಲ’ ಎಂದು. ಅದು ಕೇವಲ ನನ್ನ ಪ್ರಶ್ನೆಯಲ್ಲದೇ ಬೆರಗು ಕೂಡಾ ಆಗಿತ್ತು! ಬದುಕನ್ನು ತುಂಬ ಕಠೋರವಾಗಿ… ಅಂದರೆ ಅಗತ್ಯಕ್ಕಿಂತ ಹೆಚ್ಚು ಕಠೋರವಾಗಿ ಬದುಕುವ ಅಗತ್ಯವಿಲ್ಲ ಮತ್ತು ಸಣ್ಣದೊಂದು ಕಾರುಣ್ಯದ ಹನಿ ಜಗತ್ತಿಗೆ ಚುಮುಕಿಸಲು ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ ಎಂದು ಅರ್ಥವಾದ ನಂತರ, ಅವರ ಕಷ್ಟಸುಖ ಕೇಳುತ್ತಲೇ ಎದೆಯಲ್ಲಿ ಕಾರುಣ್ಯ ಮೂಡಿ, ತುಸು ‘ಹೆಚ್ಚು ಮನುಷ್ಯಳಾಗುತ್ತಾ’ ಹೋದೆ ಅನ್ನಬಹುದು”
ಕತೆಗಾರ ಅಬ್ದುಲ್ ರಶೀದ್ ಅವರ ‘ಮೈಸೂರು ಪೋಸ್ಟ್’ ಕೃತಿಗೆ  ಭಾರತಿ ಬಿ.ವಿ. ಬರೆದ ಮುನ್ನುಡಿ

Read More

ಬೊಳುವಾರು ಆತ್ಮಕತೆ ‘ಮೋನು ಸ್ಮೃತಿ’ಯ ಪುಟಗಳು

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?
ಬೊಳುವಾರು ಮಹಮದ್ ಕುಂಞಿ ಅವರ ಆತ್ಮಕತೆ ‘ಮೋನು ಸ್ಮೃತಿ’ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಭಾಷಾಸತ್ರದ ಕಡೆಗಿನ ಪಯಣದಲ್ಲಿ ಜ್ಞಾನವಿಕಾಸದ ಹೆಜ್ಜೆಗುರುತುಗಳು

ನಾಲ್ಕು ವರ್ಷಗಳ ದೀರ್ಘಕಾಲದ ಬರಹದೊಂದಿಗೆ ರೂಪುಗೊಂಡ ಕಾದಂಬರಿ ಎನ್ನಬಹುದಾದ ಪ್ರಕಾರದಲ್ಲಿರುವ ಕೃತಿ ‘ವರ್ಣಕ’. ಹಾಗೆ ನೋಡಿದರೆ, ಇದನ್ನು ಕಾದಂಬರಿ ಎಂದರೆ ತುಸು ಹೃಸ್ವವಾದದಂತೆ ಭಾಸವಾಗುತ್ತದೆ. ಬಣ್ಣದ ಹೂವುಗಳ ಮಾಲೆಯನ್ನು ನೇಯ್ದಂತೆ, ಭಾಷಾ ಕ್ಷೇತ್ರದ ವೈವಿಧ್ಯಮಯ ಬೆಳವಣಿಗೆಗಳನ್ನು ಕಥೆಯೆಂಬ ಸೂತ್ರದಲ್ಲಿ ಲೇಖಕರು ಬಂಧಿಸಿದ್ದಾರೆ . ಅಲ್ಲಿ ಕಥೆಯ ಮುನ್ನಡೆಗೋಸ್ಕರ ವಿಸ್ಮಯ, ಭ್ರಮೆಯೆಂಬಂತಹ ಕಲ್ಪನೆಗಳ ನೆರವನ್ನು ಪಡೆದಿದ್ದಾರೆ. ಭಾರತೀಯ ಭಾಷಾ ಗಣಕ ಪಿತಾಮಹ ಕಿನ್ನಿಕಂಬಳ ಪದ್ಮನಾಭ ರಾವ್‍ ಬರೆದ ‘ವರ್ಣಕ’ ಕಾದಂಬರಿಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ  ಇಲ್ಲಿದೆ. 

Read More

ಡಾ. ಗೀತಾ ಶೆಣೈ ಅನುವಾದಿಸಿರುವ “ಅದೃಷ್ಟ” ಕಾದಂಬರಿಯ ಒಂದು ಅಧ್ಯಾಯ

ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ.
ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್‌ ಅವರ ಕಾದಂಬರಿಯನ್ನು ಡಾ. ಗೀತಾ ಶೆಣೈ “ಅದೃಷ್ಟ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ