Advertisement

Category: ದಿನದ ಪುಸ್ತಕ

ಎಸ್. ದಿವಾಕರ್ ಕವನ ಸಂಕಲನದ ಕುರಿತು ಎಚ್. ಆರ್. ರಮೇಶ್ ಬರಹ

“ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ.”

Read More

ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ.”

Read More

ಸುನೈಫ್ ವಿಟ್ಲ ಅನುವಾದಿಸಿ ವೈಕಂ ಮುಹಮ್ಮದ್ ಬಷೀರ್ ಕತೆ “ಅಮ್ಮ”

“ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ…”

Read More

ಸೋಮುರೆಡ್ಡಿ ಕಾದಂಬರಿ ಕುರಿತು ಅಮರೇಶ ನುಗಡೋಣಿ ಲೇಖನ

“ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು… “

Read More

ಸತೀಶ್ ಚಪ್ಪರಿಕೆ ಕಥಾಸಂಕಲನಕ್ಕೆ ಅವರೇ ಬರೆದ ಮುನ್ನುಡಿಯ ಮಾತುಗಳು

” ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ