Advertisement

Category: ದಿನದ ಪುಸ್ತಕ

ಶರಣಬಸವ ಕೆ. ಗುಡದಿನ್ನಿ ಹೊಸ ಕಥಾ ಸಂಕಲನದಿಂದ ಒಂದು ಕಥೆ

“ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ.”

Read More

ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ

“ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.”

Read More

‘ನಾನು ಮೆಚ್ಚಿದ ನನ್ನ ಕಥೆʼ ಕಥಾ ಸಂಪುಟಗಳ ಸಂಪಾದಕರ ಮಾತು

“ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ.”
ಇತ್ತೀಚೆಗೆ ಬಿಡುಗಡೆಯಾದ ʼನಾನು ಮೆಚ್ಚಿದ ನನ್ನ ಕಥೆʼ, ನಾಲ್ಕು ಸಂಪುಟಗಳ..”

Read More

ಎಸ್. ದಿವಾಕರ್ ಅವರ ಹೊಸ ಪುಸ್ತಕದಿಂದ ಒಂದು ಪ್ರಬಂಧ

“ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.”

Read More

ಶ್ರುತಿ ಬಿ.ಆರ್‌. ಕವನ ಸಂಕಲನಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

“ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ