Advertisement

Category: ಪುಸ್ತಕ ಸಂಪಿಗೆ

ದೇಸೀಧ್ವನಿಯ ಕಥೆಗಳು: ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನಕ್ಕೆ ಡಾ. ಮಹೇಶ್ವರಿ ಯು. ಮುನ್ನುಡಿ

ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ

Read More

ಲೋಕಾಂತ ಕವಿಯ ಏಕಾಂತ ಬದುಕಿನ ಅನಾವರಣ: ಡಾ. ಎ. ರಘುರಾಂ ಬರಹ

ಲೆಕ್ಕದಲ್ಲಿ ತಾನು ಅಷ್ಟೊಂದು ಪಂಡಿತನಲ್ಲ ಎನ್ನುವ ಕಾರಣಕ್ಕೆ ತಿಂಗಳಿಗೆ ಮೂವತ್ತೈದು ರೂಪಾಯಿ ಸಂಬಳದ ಪವರ್‌ಹೌಸ್‌ನ ನೌಕರಿಯನ್ನು ಬಿಟ್ಟು ಇಪ್ಪತ್ತೊಂದು ರೂಪಾಯಿಯ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಲೆಕ್ಕ ಬರದೇ ಇರುವ ಕಾರಣದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಶಿಕ್ಷಕ ವೃತ್ತಿಯ ಕಾರಣದಿಂದಲ್ಲ. ಒಮ್ಮೆ ಮಗಳು ‘ಗಣಿತ ಕಲಿಸುವುದನ್ನು ಹೇಗೆ ನಿಭಾಯಿಸಿದೆ? ಗಣಿತ ನಿನಗೆ ಬರುವುದೇ ಇಲ್ಲವಲ್ಲ’ ಎಂದು ಕೇಳಿದ್ದಕ್ಕೆ ‘ವಿದ್ಯಾರ್ಥಿಗಳಿಗೆ ನಾನು, ನೀವು ಇಬ್ಬರೂ ಕೂಡಿಯೇ ಗಣಿತವನ್ನು ಬಗೆಹರಿಸಿಕೊಳ್ಳೋಣ..’ ಎಂದು ಹೇಳಿದೆ ಎಂದು ಗಹಗಹಿಸಿ ನಕ್ಕನು.
ತಮ್ಮ ತಂದೆ ಶಾಂತರಸರೊಂದಿಗಿನ ಒಡನಾಟದ ಕುರಿತು ಎಚ್.ಎಸ್.‌ ಮುಕ್ತಾಯಕ್ಕ ಬರೆದ “ಅಪ್ಪ ನಾನು ಕಂಡಂತೆ” ಕೃತಿಯ ಕುರಿತು ಡಾ. ಎ. ರಘುರಾಂ ಬರಹ ನಿಮ್ಮ ಓದಿಗೆ

Read More

ಬನ್ನಿ ನಾವೆಲ್ಲರೂ ಕಾಣೆಯಾಗೋಣ…: ಕನ್ನಡಕ್ಕೆ ಬಂದ ಮೇರಿ ಆಲಿವರ್‌ ಕವಿತೆಗಳು

“ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.”
ಅಮೆರಿಕದ ಕವಯತ್ರಿ ಮೇರಿ ಆಲಿವರ್‌ ಅವರ ಕೆಲವು ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಕನ್ನಡಕ್ಕೆ ತಂದಿದ್ದು “ಆಕಾಶ ನದಿ ಬಯಲು” ಶೀರ್ಷಿಕೆಯಡಿಯಲ್ಲಿ ಸಂಗ್ರಹ ಪ್ರಕಟವಾಗಿದೆ. ಈ ಕೃತಿಯ ಒಂದಷ್ಟು ಕವಿತೆಗಳು ಹಾಗೂ ಮೇರಿ ಆಲಿವರ್‌ ಪರಿಚಯಾತ್ಮಕ ಪುಟಗಳು ನಿಮ್ಮ ಓದಿಗೆ

Read More

ತಂದೆಯವರೊಂದಿಗಿನ, ಮಗನ ನೆನಪುಗಳು: ಪಾಲಾಕ್ಷಪ್ಪ ಎಸ್.ಎನ್. ಬರಹ

ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ “ಅಣ್ಣನ ನೆನಪು” ಕೃತಿಯ ಕುರಿತು ಪಾಲಾಕ್ಷಪ್ಪ ಎಸ್.ಎನ್. ಬರಹ ನಿಮ್ಮ ಓದಿಗೆ

Read More

ಬಹು ಆಯಾಮದ ಕವಿತೆಗಳು: ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ

ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ, ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು. ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದವೊಂದೇ ಸಾಧನ ಅಥವಾ ಪ್ರಮಾಣ.
ಡಾ. ಅಜಿತ್‌ ಹರೀಶಿ ಕವನ ಸಂಕಲನ “ತೇಲಿಬಿಟ್ಟ ಆತ್ಮಬುಟ್ಟಿ”ಗೆ ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ