Advertisement

Category: ಸಂಪಿಗೆ ಸ್ಪೆಷಲ್

ಹೊಸತನದ ಹಾಡಿಗೆ ಕಾದಿರುವ ಹೊಸ ಸಂವತ್ಸರ

ಶಿಶಿರ ಋತುವಿನ ಚಳಿಗಾಲದಲ್ಲಿ ಒಣಗಿದ ಮರ-ಗಿಡಗಳು ವಸಂತ ಋತುವಿನಲ್ಲಿ ಮತ್ತೆ ಚಿಗುರುವಂತೆ `ಯುಗಾದಿ’ ಯ ಹೊಸತನ ಮನುಷ್ಯನ ಬದುಕಲ್ಲಿಯೂ ಹೊಸ ಜೀವ ತುಂಬಬಲ್ಲ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಇಡೀ ದೇಶದಲ್ಲಿಯೇ ವಿಭಿನ್ನವಾಗಿ ನಡೆಯುತ್ತದೆ. ಮುಖ್ಯವಾಗಿ ಕೃಷಿ ಆಧಾರಿತ ದೇಶದಲ್ಲಿ, ಬೇಸಿಗೆಯ  ಈ  ಹಬ್ಬದಲ್ಲಿ ಸಂಭ್ರಮವು ಒಂದು ತೂಕ ಹೆಚ್ಚೇ. ಬೈಸಾಕಿ, ಗುಡಿಪಾಡ್ವಾ, ಯುಗಾದಿ ಎಂಬೆಲ್ಲ ಹತ್ತಾರು ಹೆಸರುಗಳಲ್ಲಿ ಬರುವ  ಈ ಹಬ್ಬವನ್ನು ಕನ್ನಡದ ಕವಿಗಳು ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣಿಸಿದ್ದಾರೆ. ಮಂಡಲಗಿರಿ ಪ್ರಸನ್ನ ಬರಹ 

Read More

ಸುಳ್ಳು ನಮ್ಮ ಮನೆದೇವರಾಗಿ..

ಸುಳ್ಳು ಸುದ್ದಿಯನ್ನುತಡೆಯುವ ಪ್ರಯತ್ನ ಹಿಂದೆಯೂ ನಡೆಯುತ್ತಿತ್ತು. ಇಂದೂ ನಡೆಯುತ್ತಿದೆ.  ನಮ್ಮ ಉದ್ದೇಶಕ್ಕೆ ಪೂರಕವಾಗಿ ತಂತ್ರಜ್ಞಾನ, ಉಪಕರಣಗಳು ಎಷ್ಟೇ ಸಹಕಾರಿ ಆಗಿದ್ದರೂ ಅವುಗಳನ್ನು ಬಳಸುವ ಮನಸ್ಸುಗಳಲ್ಲಿ ಸುದುದ್ದೇಶವಿಲ್ಲದೇ ಇದ್ದಾಗ, ನಾವು ರೂಪಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆಗಳು ಪ್ರಯೋಜನವಿಲ್ಲದ್ದಾಗಿಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆಮಾಡುವುದೇ ಒಂದು ಸಾಹಸ.

Read More

ಸಂಘರ್ಷವನ್ನು ಗುಡಿಸಿ ಹಾಕುವ ಕಾಲ: ಪ್ರೊ.ಕೀರ್ತಿನಾಥ ಕುರ್ತಕೋಟಿ ಬರಹ

ಕತೆಯ ವರ್ಣನೆಯಲ್ಲಿಯ ಎಲ್ಲ ವಿವರಗಳೂ ಸಂಜ್ಞೆಗಳಾಗುವದಿಲ್ಲ. ಸಂಜ್ಞೆಗಳು ಪ್ರತೀಕಗಳಾಗುವದಿಲ್ಲ. ವಿವರಗಳಿಗಿಂತ ಸಂಜ್ಞೆಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಭಾವಸಂಜ್ಞೆಗಳಾಗಿದ್ದರೆ ಮನಸ್ಸನ್ನು ಕಲಕುತ್ತವೆ. ಆದರೆ ಪ್ರತೀಕಗಳು ಹೆಚ್ಚು ಲಕ್ಷ್ಯವನ್ನು ಅಪೇಕ್ಷಿಸುತ್ತವೆ. ಉದಾಹರಣೆಗೆ ದುರ್ಗಿ ಸಾಯುವ ರಾತ್ರಿ ಕಿಟಕಿಯಲ್ಲಿ ಕಾಣುವ ಸೇವಂತಿಗೆ ಹೂವಿನ ಟ್ರಕ್ಕು ಒಂದು ಪ್ರತೀಕವಾಗಿರುವದರಿಂದ ಅದು ತನ್ನ ಅರ್ಥವನ್ನು ಬೇಗ ಬಿಟ್ಟುಕೊಡುವದಿಲ್ಲ. ಅದು ಕೂಡ ಕತೆಯ ವಾಸ್ತವ ವಿವರಗಳಲ್ಲಿ ಒಂದಾಗಿದೆ, ಆದರೂ ವಿಸಂಗತವಾಗಿದೆ.

Read More

ಮುಡಿಯೇರಿ ಮೆರೆದ ಮೇಲೂ ಬಾಡದ ಹೂಗಳು

ಇತ್ತೀಚೆಗೆ ಸೀರಿಗೆ ಹೊಂದೊ ಬಣ್ಣದ ಹೂ ಇಟ್ಕೊಳೊದು ಒಂದ್ ಫ್ಯಾಷನ್ ಆಗ್ಯದ. ನಾನು ಕಾರ್ಯಕ್ರಮಗಳಿಗೆ ಹೋಗೋದೆ ಕಮ್ಮಿ ಆದ್ರಿಂದ ಹೋದಾಗ ಒಂದ್ ಸ್ವಲ್ಪ ನೋಡಿದ್ದೆ, ಏನೊ ವಿಶೇಷ ಹೊತ್ನಾಗ ಇಟ್ಕೊತಾರ ಬಿಡು ಅನ್ಕೊಂಡು ಸುಮ್ನಾಗಿದ್ದೆ. ಆದ್ರ ಇಲ್ಲಿ ನೋಡಿದ್ರೆ ಊರಿಗೆ ಊರೆ ಅಂಥಾ ಹೂ ಇಟ್ಕೊಂಡು ಮೆರಿಲಿಕತ್ತದ. ಅವುಗಳಲ್ಲಿ ಅನೇಕವು ಖರೆ ಹೂವೆನೊ ಅನ್ನೊ ಹಂಗೆ ಇದ್ದವು. ಆದ್ರ ಇಲ್ಲಿ ವಿಷಯ ಬರೀ ಹೂವಿಂದಲ್ಲ. ನಮ್ಮ ಜನ ಎಷ್ಟು ಬೇಗ ಕೃತಕತೆ ಅನ್ನೊದಕ್ಕೆ ಆಕರ್ಷಿತರಾಗ್ತರ ಅನ್ನೋದು.
ಪರಿಸರ ಕಾಳಜಿಯ ಕುರಿತ ಶಾಲಿನಿ ನೂತನ್‌ ಬರಹ ನಿಮ್ಮ ಓದಿಗೆ

Read More

ಬದುಕನ್ನು ಅರಸಿಕೊಂಡು ಓಡುತ್ತಲೇ ಇರಬೇಕು

ರೆಹಮಾನಿ ಅವರು ಉಕ್ರೇನ್‍ ನಲ್ಲಿ ನೆಲೆಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಒಂದು ವರ್ಷವೂ ಭರ್ತಿಯಾಗಿದೆಯೋ, ಇಲ್ಲವೋ, ಅಲ್ಲಿ ಯುದ್ಧದ ಬಿಸಿಯೇರುತ್ತಿರುವುದು ಕಾಣಿಸಿತು. ತಾವು ಬಯಸಿದ ಬದುಕು ಅಲ್ಲಿಯೂ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಮತ್ತೆ ಅಲ್ಲಿಂದ ಹೊರಡಲೇಬೇಕಾಯಿತು. ರಷ್ಯಾ ಪಡೆಗಳು ಸ್ಫೋಟಿಸುತ್ತಿದ್ದ ಬಾಂಬುಗಳ ಸದ್ದಿನ ನಡುವೆಯೇ ಅವರು ಆ ದೇಶವನ್ನು ತೊರೆದರು. ಯಾರದೋ ಯುದ್ಧ ದಾಹಕ್ಕಾಗಿ ಬದುಕು ಕಳೆದುಕೊಳ್ಳುತ್ತಿರುವವರ ಕತೆಗಳಿಗೆ ದನಿಯೆಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ