Advertisement

Category: ಸಂಪಿಗೆ ಸ್ಪೆಷಲ್

ಮಹನೀಯ ಮದ್ಲೆಗಾರರ ಪ್ರಭಾವಲಯ

ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

Read More

ಸುದ್ದಿಗಾರ ಕೆಂಪಣ್ಣ…

ಕೆಂಪಣ್ಣ ಭಜನೆಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಅವನ ಭಜನೆಯ ಬೈಠಕ್ ಒಂದು ರೀತಿ ಮತ್ತೇರಿಸುತ್ತಿತ್ತು. ಅವನು ಹಾಡಲು ಸುರುಮಾಡಿದರೆ ಹಿಮ್ಮೇಳದವರು ತಲಿ ಕೆರೆದುಕೊಳ್ಳುತ್ತಿದ್ದರು. ಏಕೆಂದರೆ ಅವನು ಹೇಳಿದ ಪದಗಳನ್ನು ಹಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅವನ ಪದಗಳೋ ರೈಲು ಬಂಡಿಯಂತೆ ಉದ್ದವಾಗಿರುತ್ತಿದ್ದವು. ‘ಬೆಳ್ಳನೇ ಎರೆಡೆತ್ತು ಬೆಳ್ಳಿಯ ಬಾರುಕೋಲು ಕೇರಿಯ ದಂಡಿಯ ಹೊಲಕ್ಕೆ… ಕೆರೆಯ ದಂಡೆಯ ಹೊಲಕ್ಕೆ… ‘ ಎಂದು ಚೆಂದವಾಗಿ ಪದ ಹಾಡಹತ್ತಿದರೆ ಬಸವಣ್ಣನ ಗುಡಿಯೊಳಗಿನ ಕಲ್ಲಿನ ಬಸವನು ಕೂಡಾ “ಕೆಂಪಣ್ಣ ಹೊಲಕ್ಕೆ ನಾನು ಬರ್ತೀನಿ” ಅಂತಾ ಜೊತೆಯಾಗುತ್ತಿತ್ತು.

Read More

ಅಳುವ ಕಡಲಿನ ನಗೆಯ ದೋಣಿ

ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ.

Read More

ಜಗಳ ನಮ್ಮ ಮನೆದೇವರು

ಜಗಳಗಳೆಂದರೆ ಎಲ್ಲರಿಗೂ ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿಯಾದರೂ ಇಷ್ಟವಾಗುತ್ತದೆ. ಹಸಿವು ನಿದ್ದೆಯ ಅಗತ್ಯವಿದ್ದಂತೆ, ಮನಸ್ಸಿಗೆ ಒಂದಿಷ್ಟು ಜಗಳದ ಅವಶ್ಯಕತೆಯೂ ಇದೆಯೇನೋ. ಆದರೆ ಅದು ಮನುಷ್ಯನ ಬದುಕಿಗೇ ಕುತ್ತು ತಂದಾಗ ಸಮಸ್ಯೆಗಳು ಬೆಳೆಯಲಾರಂಭಿಸುತ್ತವೆ. ಗುಬ್ಬಿಯನ್ನು ಕಂಡರೆ ಅಕ್ಕರೆ ಮೂಡಿದಂತೆ, ಬೆಕ್ಕುಗಳನ್ನು ಕಂಡರೆ ಮುದ್ದು ಬಂದಂತೆ, ಜಗಳಗಳಿಗೂ ಸಾಮಾನ್ಯವಾದುದೊಂದು ಕಾರಣವಿದೆಯೇ.. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ

Read More

ನಿಂತ ಶಹನಾಯಿಯ ನಾದ: ಕಣವಿಯವರ ಕವಿತೆಯೊಂದರ ಕುರಿತು

ಸೃಷ್ಟಿಯ ನಿಗೂಢತೆಯ ಬಗ್ಗೆ ಸದಾ ವಿಸ್ಮಯವನ್ನು, ಕುತೂಹಲವನ್ನೂ ಹೊಂದಿದ್ದ, ಆ ವಿಸ್ಮಯವನ್ನು ಕಾವ್ಯಸಾಲುಗಳಲ್ಲಿ ಪ್ರತಿಬಿಂಬಿಸುತ್ತಿದ್ದ, ಹಿರಿಯ ಕವಿ ಚೆನ್ನವೀರಣ ಕಣವಿ ತೀರಿಕೊಂಡಿದ್ದಾರೆ. ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ, ನಾಡೋಜ ಮುಂತಾದ ಅನೇಕ ಬಿರುದುಗಳು ಅವರಿಗೆ ಸಂದಿದ್ದರೂ ಅವರು, ಕನ್ನಡ ಭಾವಗೀತೆ ಪರಂಪರೆಯ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ಭಾವತೀವ್ರತೆಗೇ ಆದ್ಯತೆ.
‘ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ’ ಎಂದು ಬರೆದ ಕವಿ ಅವರು. ಅವರು ಬರೆದ  ‘ಬಿಸ್ಮಿಲ್ಲಾರ ಶಹನಾಯಿ ವಾದನ ಕೇಳಿ’ ಕವಿತೆಯ ಕುರಿತು ಲೇಖಕಿ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ