Advertisement

Category: ಸರಣಿ

ಕತ್ತಲಲಿ ಕಂಡ ಮಿನುಗುವ ಕಣ್ಣುಗಳು….

ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ

Read More

ಕಿನ್ನರಿ…

ಯಾವ ಪ್ರಚಾರವನ್ನೂ ಒಲ್ಲದ ತಮ್ಮ ಪಾಡಿಗೆ ತಾವಿರುವ ಈ ತಪಸ್ವಿನಿ ತಮ್ಮ ಪೂರ್ವಾಶ್ರಮದಲ್ಲಿ ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ನಾನು ಇವರ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದ ಒಂದು ಲೇಖನ ಇವರಿಗೆ ಮುಜುಗರ ತಂದಿತ್ತು. ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹವರನ್ನು ಭೇಟಿ ಮಾಡಿಸಬೇಕೆಂದೂ ಅವರ ಸಮ್ಮುಖದಲ್ಲಿ ಒಂದು ಪತ್ರಿಕಾ ಸಭೆಯನ್ನು ಕರೆಯಬೇಕೆಂದೂ ನನ್ನ ಪರಿಚಯದ ಸಾಹಿತಿಯೊಬ್ಬರು ನನಗೆ ಬಹಳ ದಿನಗಳಿಂದ ದುಂಬಾಲು ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ಬದುಕುತ್ತಿರುವ ಇವರನ್ನು ನಾನು ಒಮ್ಮೆ ಭೇಟಿಯಾಗಿ ಬಂದಿದ್ದುದೇ ಇದಕ್ಕೆ ಕಾರಣವಾಗಿತ್ತು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿ

Read More

ಕ್ರಿಕೆಟ್‌ ಜಗತ್ತಿನ ಕೆಚ್ಚೆದೆಯ ಸರ್ದಾರರು

ಸ್ಟುವರ್ಟ್ ವಿರುದ್ಧ ಸಿಟ್ಟಿನಲ್ಲಿದ್ದ ಯುವ್‌ರಾಜ್‌ ಸ್ಟುವರ್ಟ್ ಬ್ರಾಡ್‌ನ ಬೋಲಿಂಗ್ ಎದುರಿಸಲು ಮುಂದಾದರು. ಅವರ ಸಿಟ್ಟು ಎಷ್ಟರಮಟ್ಟಿಗೆ ಇತ್ತು ಅಂದರೆ ಮುಂದೆ ಅವರು ಆಡಿದ ಪ್ರತಿ ಬಾಲನ್ನೂ ಸಿಕ್ಸರ್‌ಗೆ ಕಳಿಸಿದರು. ಒಂದೊಂದು ಸಿಕ್ಸರ್ ಹೊಡೆದಮೇಲೂ ಫ್ಲಿಂಟಾಫ್ ಕಡೆಗೆ ನೋಡಿ ಬ್ಯಾಟ್ ತಿರುಗಿಸುತ್ತಿದ್ದರು ಯುವ್‌ರಾಜ್‌! ಬ್ರಾಡ್ ಪಾಪ! ಅವರು ಬಹಳ ದೊಡ್ಡ ಬೆಲೆ ತೆರಬೇಕಾಯಿತು. 6 ಬಾಲುಗಳಲ್ಲಿ 36! ಇ ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಯುವ್‌ರಾಜ್‌ ಸಿಂಘ್‌ ಹಾಗೂ ಹರ್ಭಜನ್‌ ಸಿಂಘ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

Read More

ಅಪ್ಪನ ಅಲ್ಸರ್ ಖಾಯಿಲೆ ಮತ್ತು ಅಂಕಗಳ ವ್ಯಾಮೋಹ

ಈಗಿನಂತೆ ಮೊಬೈಲ್ ಕಾಲವೂ ಅಲ್ಲ. ಊರಿಗೆ ಲ್ಯಾಂಡ್ ಫೋನ್‌ ಸಹ ಇರಲಿಲ್ಲ. ಅಪ್ಪನ ಜೊತೆಯಲ್ಲಿ ಹೋಗಿದ್ದ ಕೆಲವರು ಬೆಳಿಗ್ಗೆ ಬಂದು ಹೇಳಿದಾಗಲೆ ನಮಗೆ ತಿಳಿದಿದ್ದು. ಅಪ್ಪನಿಗೆ ‘ಅಲ್ಸರ್’ ಆಗಿದೆ ವಿಪರೀತ ಹಾಲ್ಕೋಹಾಲ್ ಸೇವನೆಯಿಂದ ಹೀಗಾಗಿದೆ ಎಂದು. ಬೆಳಗ್ಗೆಯಷ್ಟರಲ್ಲಿ ಶಸ್ತ್ರಚಿಕಿತ್ಸೆ ಮುಗಿದು, ಯಶಸ್ವಿಯಾಗಿತ್ತು. ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ವಿಷಯವನ್ನು ತಿಳಿಸಿದ್ದರು. ರಾತ್ರಿ ಇಡೀ ನಿದ್ದೆಯಿಲ್ಲದೆ ಆತಂಕದಿಂದಲೇ ಕಳೆದಿದ್ದ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ

Read More

ಕನ್ನಡ ಚಳವಳಿಯ ಕಾಲದಲ್ಲಿ…

ಕನ್ನಡ ಸಂಯುಕ್ತ ರಂಗ ಎನ್ನುವ ಸಂಘಟನೆ ಚಳವಳಿಗೆ ಅಂತಲೇ ರೂಪುಗೊಂಡಿತ್ತು. ರಾಮಮಂದಿರದ ಬಳಿಯ ಒಂದು ಅಂಗಡಿಯ ಮೇಲೆ ಎರಡು ಮೈಕ್ ಸ್ಟಾಂಡ್ ಇಟ್ಟು ಮೂರು ನಾಲ್ಕು ಕಬ್ಬಿಣದ ಫೋಲ್ಡಿಂಗ್ ಖುರ್ಚಿ ಹಾಕುತ್ತಿದ್ದ ವೇದಿಕೆ ಅದು. ಪಕ್ಕದಲ್ಲೇ ಇಪ್ಪತ್ತು ಮೂವತ್ತು ಅಡಿ ಎತ್ತರದ ಬೊಂಬಿನ ಏಣಿ ಇಟ್ಟಿರುತ್ತಿದ್ದರು. ಅದರ ಮೂಲಕ ಅಂಗಡಿ ಚಾವಣಿ ಏರುತ್ತಿದ್ದರು, ಭಾಷಣಕಾರರು. ಒಬ್ಬೊಬ್ಬರ ಭಾಷಣವೂ ಉದ್ರೇಕ ರಹಿತ ಮತ್ತು ಅತ್ಯಂತ ಸೌಮ್ಯ. ಹೇಳಬೇಕಾದ್ದನ್ನು ಅತಿಶಯೋಕ್ತಿ ಇಲ್ಲದೆ ಚಿಕ್ಕ ಚೊಕ್ಕದಾಗಿ ಹೇಳುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ