Advertisement

Category: ಸರಣಿ

ಒಡಲ ಕುಡಿಯ ಕಿತ್ತುಕೊಂಡವರಿಗೆ ಎಷ್ಟು ಸುಖವೋ

ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೇಯ ಕಂತು.

Read More

ಮಕ್ಕಳಿಗೆ ಕಲಿಸುತ್ತಾ… ನಾವೂ ಕಲಿಯುತ್ತಾ…

ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್‌ ಪುಸ್ತಕ, ಪೆನ್ನು, ಕಂಪಾಸ್‌ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

Read More

ಗಿರಣಿವಡ್ಡರ್ ಮತ್ತು ಬಾವಿ ತೋಡುವ ಗಂಟಿಚೋರರು

‘ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ವೈಸರ್  ಹೆಂಡತಿಗೆ ಹೊಡೆದಂತೆ  ನಮಗೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿದ್ದವು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು.

Read More

ರಷ್ಯಾದ ʻಸಿಂಪಲ್‌ ಥಿಂಗ್ಸ್ʼ: ಕತೆ ಹೇಳುವ ಕಣ್ಣುಗಳು

ಜು಼ರಾವ್ಲೊಫ್‌ಗೆ ಸೆರ್ಗಿಯನ್ನು ಕಂಡರೆ ವಿಶೇಷ ಬಗೆಯ ಪ್ರೀತಿ. ಸಹಜ ಹಾಗೂ ಸಾಮಾನ್ಯ ಮನುಷ್ಯನಾಗಿ ಯಾವ ಬಗೆಯ ಹಿಂಸೆ ಕೊಡದೆ ನಡೆದುಕೊಳ್ಳುವ ಅವನ ಸ್ವಭಾವ ಇಷ್ಟವಾಗುತ್ತದೆ. ಹಾಗಾಗಿಯೇ ಅವನು ತನ್ನ ಬಳಿ ಇರುವ ಅಗಾಧ ಬೆಲೆಯ ಕಲಾಕೃತಿಯನ್ನು ಗಿಫ್ಟ್ ಕೊಡುವುದಾಗಿ ಹೇಳಿ ಬರೆದುಕೊಡುತ್ತಾನೆ. ಅದನ್ನು ಮಾರಿದರೆ ಉತ್ತಮವಾದ ಫ್ಲಾಟ್‌ ಕೊಂಡುಕೊಳ್ಳಬಹುದು ಎನ್ನುತ್ತಾನೆ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಸೆರ್ಗಿ ಜು಼ರಾವ್ಲೊಫ್‌ ತನ್ನ ಆರ್ಥಿಕ ಪರಿಸ್ಥಿತಿಯನ್ನು ಲೇವಡಿ ಮಾಡುತ್ತಿದ್ದಾನೆ ಎಂದು ಉದ್ವಿಗ್ನಗೊಂಡು ಅಬ್ಬರಿಸುತ್ತಾನೆ.

Read More

ಒಡಲ ಕುಡಿಯ ಕಿತ್ತುಕೊಳ್ಳಲು ತಾಯ ಹಂಗೇ

ಆ ಮಂಗಾಡಳ್ಳಿಯವನ ನಿಮ್ಮಪ್ಪ ಹಿಡಿಸಿ ಕಡಿಸಿಬಿಟ್ಟನಂತಲ್ಲಾ… ಪ್ರಾಣ ಮಿತ್ರಾ ಅಂತಿದ್ದ. ಪ್ರಾಣ ಮಿತ್ರನೇ ಪ್ರಾಣ ತಿಂದು ಬಿಟ್ಟನಲ್ಲಾ… ತಂದೆ ತಾಯಿ ಮಾಡಿದ ಪಾಪ ಮಕ್ಕಳಿಗೆ ಶಾಪವಾಗಿ ಬಡಿಯುತ್ತದಂತೇ… ಯಾರ ತಪ್ಪಿಗೆ ಯಾರ ಶಿಕ್ಷೆಯೋ ನಿನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ನಿಮ್ಮಪ್ಪನ ಮೇಲಿನ ಸಿಟ್ಟಿಗೆ ನಿಮ್ಮಜ್ಜಿಯೆ ಕತ್ತು ಮುರಿಯಲು ಮುಂದಾಗಿದ್ದಳಂತಲ್ಲಾ… ನಿಮ್ಮಜ್ಜಿಯೇ ನನ್ನ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಳು. ಸಂತೆಗೆ ಹೋದರೆ ನಿಮ್ಮಜ್ಜಿಯ ಮಾತಾಡಿಸೂ.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಒಂಭತ್ತನೇ ಕಂತು. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ