ಎಂಡದ ಗಡಿಗೆ ಹೊತ್ತ ಸರಸಿಯರು
ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ‘ಒಮ್ಮೆ ಕರೆದುಕೊಂಡು ಬಾ’ ಎನ್ನುತ್ತಿದ್ದರು. ಆಕೆ ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ, ‘ನನ್ನ ಅನಂತ ನೀಲಿ ಆಕಾಶ’ ಸರಣಿಯ ಹೊಸ ಬರಹ
Read More
