Advertisement

Category: ಸರಣಿ

ರಾಜಕೀಯದಾಗೆ ಅಪ್ಪನ ಕಸರತ್ತು: ಸುಮಾ ಸತೀಶ್ ಸರಣಿ

ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಪಿಯುಸಿಯ ಕಡುಕಷ್ಟದ ಆ ದಿನಗಳು….: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕಿಶೋರಿ ತರಬೇತಿಯ ಸುತ್ತಮುತ್ತ: ಅನುಸೂಯ ಯತೀಶ್ ಸರಣಿ

ಕಿಶೋರಿ ತರಬೇತಿಯ ಪ್ರಮುಖ ಆಶಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದ ವಿವಿಧ ರೂಪಗಳನ್ನು ಪರಿಚಯಿಸುವುದು ಮತ್ತು ಮಕ್ಕಳ ಸಾಗಾಟದ ಬಗ್ಗೆ ಎಚ್ಚರಿಕೆ ಮೂಡಿಸುವುದು. ಆ ವಯೋಮಾನದ ಮಕ್ಕಳಿಗೆ ಏನು ತಿಳಿದಿರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮೆಲ್ಲರ ನಿರೀಕ್ಷೆಗಳು ಸುಳ್ಳಾದವು. ಮಕ್ಕಳ ಸಾಗಾಟ ಏಕೆ ಮಾಡುತ್ತಾರೆ ಎಂದಾಗ ಬಂದು ಉತ್ತರಗಳು ಇಂದಿನ ಮಕ್ಕಳು ತುಂಬಾ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ನೀಡುತ್ತಿದ್ದವು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಸ್ವಾಭಿಮಾನದ ಸಂಕೇತ “ವಿ. ಶ್ರೀನಿವಾಸಪ್ರಸಾದ”: ರಂಜಾನ್ ದರ್ಗಾ ಸರಣಿ

12ನೆಯ ಶತಮಾನದ ಬಸವಾದಿ ಶರಣರು ಈ ಹಿಂಸಾಯಂತ್ರಕ್ಕೆ ನೇರವಾದ ಸವಾಲೆಸೆದರು. ಕಾಯಕ ಸಿದ್ಧಾಂತದ ಮೂಲಕ ಇದರ ಮರ್ಮವನ್ನು ಹೊರಗೆಳೆದರು. ಈ ಹಿಂಸಾಯಂತ್ರದ ಬಿಡಿ ಉಪಕರಣಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ ಮತ್ತು ಲಿಂಗಭೇದದ ವಿರುದ್ಧ ಶರಣರು ಹೋರಾಡಿದರು. ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿಕೊಂಡು ತಮ್ಮ ಸವರ್ಣೀಯ ಚಾಲಕರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತ ಅದನ್ನು ಕಾಪಾಡುವುದಲ್ಲೇ ಹಿಂಸಾಯಂತ್ರ ತಲ್ಲೀನವಾಗಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಎಂ.ಎಸ್.‌ ರಾಮಯ್ಯ ಕುರಿತು ಮತ್ತಷ್ಟು…: ಎಚ್. ಗೋಪಾಲಕೃಷ್ಣ ಸರಣಿ

ಇನ್ನೊಂದು ಪ್ರಚಲಿತ ಇದ್ದ ಗಾಳಿಮಾತು ಎಂದರೆ ಅವರು ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಬೇಕು ಅಂದರೆ ಸಿಮೆಂಟ್ ಕಾರ್ಖಾನೆಯನ್ನು ಶುರುಮಾಡುತ್ತಾರೆ, ಕಬ್ಬಿಣ ಬೇಕು ಅಂದರೆ ಕಬ್ಬಿಣ ತಯಾರಿಕೆ ಫ್ಯಾಕ್ಟರಿ ಶುರುಮಾಡ್ತಾರೆ ಎನ್ನುವಂತಹ ರೆಕ್ಕೆ ಪುಕ್ಕ ಹುಟ್ಟಿಸಿಕೊಂಡ ಸುದ್ದಿಗಳು. ಬಿಲ್ಡಿಂಗ್ ಕಟ್ಟಲು ಇಟ್ಟಿಗೆ ಬೇಕು ತಾನೇ ಇವರದ್ದು ಇಟ್ಟಿಗೆ ಉದ್ಯಮ ಇತ್ತು ಮತ್ತು ಇದರಿಂದ ಈ ಸುದ್ದಿ ಹುಟ್ಟಿತೋ ತಿಳಿಯದು. ಇದಕ್ಕೆ ಪರ್ಯಾಯವಾಗಿ ಒಂದು ಜೋಕು ಹುಟ್ಟಿತ್ತು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ