Advertisement

Category: ಸರಣಿ

ಕಲಾ ಅಸೈನ್‌ಮೆಂಟ್ ಪುರಾಣ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ನಾಲ್ಕನೆಯ ಕಂತು

Read More

ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಉಗ್ರಮನಸ್ಸಿನ ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಾಭಿಮಾನಿಗಳಲ್ಲಿ ಅವರ ಜನಪ್ರಿಯತೆ ತುಸು ಕಡಿಮೆಯೆಂದೇ ಹೇಳಬೇಕು, ಮತ್ತು ಅವರು ಎಂದಿಗೂ ಮಹಾನ್ ರಾಜಕೀಯ ಕವಿತೆ, ಪ್ರಚಾರಕರ ಸಾಂದರ್ಭಿಕ ಕವಿತೆ ಅಥವಾ ರಾಜಿಯಾಗದ, ಪಟ್ಟುಬಿಡದ ಕ್ರಾಂತಿಕಾರಿಗಳ ಘೋಷಣೆ ತುಂಬಿದ ಕವನಗಳನ್ನು ಬರೆಯುವುದಿಲ್ಲ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇದು 50ರ ಬರಹ! ಇಂದಿನ ಸರಣಿಯಲ್ಲಿ ಜಮೈಕಾ (Jamaica) ದೇಶದ ಖ್ಯಾತ ಕವಿ ಮರ್ವಿನ್ ಮೊರಿಸ್-ರವರ (Mervyn Morris, 1937) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಬೆಳಕಿಗೆ ಅಂತ ಲಾಟೀನು, ಮೊಂಬತ್ತಿ ಬೆಂಕಿ ಪೆಟ್ಟಿಗೆ ತಂದಿಟ್ಟು ಪೆಟ್ರೋಮಾಕ್ಸ್‌ಗೆ ಹೊರಟೆ. ಅದು ಮೂರುನಾಲ್ಕು ಕಿಮೀ ದೂರದಲ್ಲಿ ನೋಡಿದ್ದೆ. ಆದರೆ ಅದನ್ನ ಯಾವತ್ತೂ ಹಚ್ಚಿ ಉಪಯೋಗಿಸಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕು ಪೆಟ್ರೋಮಾಕ್ಸ್ ಬಾಡಿಗೆ ತಗೊಂಡೆ. ಹೇಗೆ ಹಚ್ಚೋದು ಅಂತ ಅವನು ಅಂದರೆ ಅಂಗಡಿ ಓನರ್ ತೋರಿಸಿಕೊಟ್ಟ. ನಾಲ್ಕೂ ತಗೊಂಡು ಎರಡು ಶೌರಿ ನಮ್ಮ ವಾಚ್ಮನ್ನು, ಎರಡು ಸೈಕಲ್ ಹ್ಯಾಂಡಲ್‌ಗೆ ನೇತು ಹಾಕಿ ಮನೆ ಸೇರಿದೇವಾ? ಅವತ್ತು ರಾತ್ರಿ ಎಂಟಕ್ಕೆ ಎಲ್ಲರೂ ಸೇರಿ ನಮ್ಮ ಕಲಿತ ವಿದ್ಯೆ ಎಲ್ಲವನ್ನೂ ಖರ್ಚು ಮಾಡಿದರೂ ಒಂದೇ ಒಂದು ಪೆಟ್ರೋಮಾಕ್ಸ್ ಹತ್ತಲಿಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಶ್ರಾವಣ ಸಂಜೆಯ ಮಳೆಯಂಥ ಪ್ರೀತಿ:‌ “ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ

ಪರೀಕ್ಷೆಯ ವಿಚಾರ ಮಾತಾಡುವಷ್ಟರಲ್ಲಿ ಅವರ ಸಂಬಂಧಿ ಪ್ರತ್ಯಕ್ಷವಾಗಿದ್ದ. ಗೇಟಿನಲ್ಲೆ ನಮ್ಮಿಬ್ಬರನ್ನು ನೋಡಿರಬೇಕು. ಈಗಾಗಲೆ ಪರಿಚಯವಿದ್ದುದರಿಂದ ನನ್ನನ್ನು ಮಾತಾಡಿಸಿದ. ಮಾತಾಡಿಸಿ ‘ನೀವೇಕೆ ಬಂದಿದ್ದೀರಿ’ ಅಂದ. ನಾನು ಅದೆ ‘ಕ್ಯಾಸ್ಟ್ ಇನ್ಕಮ್’ ನೆಪ ಹೇಳಿದೆ ನನ್ನ ಸ್ನೇಹಿತರು ಬಂದಿದ್ದಾರೆ ಅವರನ್ನು ಮಾತಾಡಿಸುವ ಸಲುವಾಗಿ ಬಂದಿದ್ದೆ’ ಅಂದೆ ಅನುಮಾನ ಪಡುವ ಯಾವ ಘಟನೆಯೂ ನಮ್ಮಿಬ್ಬರ ವಿಷಯದಲ್ಲಿ ನಡೆದಿರಲಿಲ್ಲ. ನನಗೆ ಒಳ್ಳೆಯವನೆಂಬ ಪಟ್ಟ ಊರಲ್ಲಿತ್ತು. ಹಾಗಾಗಿ ಮಾತಾಡಿಸಿದವಳು ಇವಳ ಪರೀಕ್ಷೆ ಮುಗಿದ ಮೇಲೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದ. ನನಗೆ ಏನು ಹೇಳಲು ಮಾತೆ ಇರಲಿಲ್ಲ.
“ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ

Read More

ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ