Advertisement

Category: ಸರಣಿ

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ

ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ನಾಗೇಶ ಹೆಗಡೆ ಎಂಬ ವಿಸ್ಮಯ: ರಂಜಾನ್ ದರ್ಗಾ ಸರಣಿ

ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಬದುಕೆಂಬ ಚಹಾಗೊಂದಿಷ್ಟು ಒಲವಿನ ಸಕ್ಕರೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ.
ರಾಮ್ ಪ್ರಕಾಶ್ ರೈ ಕೆ. ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ