Advertisement

Category: ಸಾಹಿತ್ಯ

ಡಾ. ಮಲರ್‌ ವಿಳಿ ಅನುವಾದಿಸಿದ ಕತೆ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು”

ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಸರವನ್ನು ಬಿಚ್ಚಿದನು. ಅರಿಶಿನ ದಾರವನ್ನು ಮಾತ್ರ ಹಾಗೇ ಬಿಟ್ಟುಬಿಟ್ಟು ಬಂಗಾರದ ತಾಳಿ, ಕಾಸನ್ನು ಸೆಳೆದು ತೆಗೆದುಕೊಂಡನು. ಮೂಗುತಿಯನ್ನು ಬಿಚ್ಚಲು ನೋಡಿದ ತಿರುಪು ಎಂಬ ಸೂಕ್ಷ್ಮವನ್ನು ಅಕ್ಕಸಾಲಿಗನು ಒಳಗೆ ಇಟ್ಟಿದ್ದಾನೆ. ಬೆರಳ ತೂರಿಸಿ ಎಷ್ಟು ಪ್ರಯತ್ನಿಸಿದರೂ ಬಿಚ್ಚಲಾಗಲಿಲ್ಲ. ಕಾಡೈಯನ್ ತಾಳ್ಮೆಗೆಟ್ಟನು. ಮೂಗುತಿ ಮುಖ್ಯವೇ ಹೊರತು ಮೂಗು ಯಾತಕ್ಕೆ ಹೆಣಕ್ಕೆ? ಒಂದು ಬಾರಿ ಎಳೆದನು. ಡಾ. ಮಲರ್‌ ವಿಳಿ ಅನುವಾದಿಸಿದ ತಮಿಳಿನ ಕಥೆಗಾರ ಡಾ. ವೈರಮುತ್ತು ಬರೆದ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು” ಕತೆ, ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕತೆ

ಈ ಮನು ಹಾಗೇನೆ ತಲೆಗೇನಾದ್ರೂ ಬಂತಂದ್ರೇ ಪಟ್ಟು ಹಿಡಿದು ಮಾಡದೆ ಬಿಡೋನಲ್ಲ. ಅಷ್ಟೇ ಜಲ್ದಿನೂ ಯಾವಾಗ್ಲೂ. ಅವನು ಹೋದಲ್ಲೆಲ್ಲಾ ನಗುವಿನ ಬುಗ್ಗೆ. ಅವನಿದ್ದಲ್ಲೆಲ್ಲಾ ಗದ್ದಲ, ಖುಷಿ, ಸಂಭ್ರಮ ಯಾವತ್ತೂ. ಸಾಮಾನ್ಯ ನಾವಿಬ್ರೂ ಬೈಕ್ನಲ್ಲಿ ಹೊರಟರೆ ತನಗಿಷ್ಟವಾದ ಸಿನಿಮಾದ್ದೋ ಇಲ್ಲ ನಾಟಕದ್ದೋ ಡೈಲಾಗ್ಸ್ ಹೇಳ್ತಿರ್ತಾನೆ. ಇಲ್ಲಾಂದ್ರೆ ಆಯಾ ಸಿಚುಯೇಷನ್‌ಗೆ ತಕ್ಕನಾಗಿ ಹಾಡ್ತಾ ಇರ್ತಾನೆ, ಅದೂ ಇಲ್ಲ ಅಂದ್ರೆ ದಾರೀಲಿ ಹೋಗೋ ಬರೋರ್ನೆಲ್ಲಾ ಕಾಡೋಕೆ ಶುರು ಮಾಡ್ತಾನೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಾಹ್ನವಿ ಬಿ.ಟಿ. ಬರೆದ ಕಥೆ “ನೆರೆ ಹಾವಳಿ” ನಿಮ್ಮ ಈ ಭಾನುವಾರದ ಓದಿಗೆ

Read More

ಮಂಜಯ್ಯ ದೇವರಮನಿ ಬರೆದ ಈ ಭಾನುವಾರದ ಕತೆ

ಶಾರವ್ವನಿಗೆ ಶಿವರುದ್ರಯ್ಯನ ಇಂಥ ನಡವಳಿಕೆ ವಿಚಿತ್ರವೆನಿಸಿತು. ದೇವರ ಹೊಲ ತನ್ನ ಗಂಡನಿಗೆ ಕೊಡಿಸ್ತೀನಿ ಅಂತಾ ಪೂಜಾರಪ್ಪ ಹೇಳಿದ್ದು ತನಗೆ ಗೊತ್ತಿತ್ತು. ಸಿಗಬೇಕು ಎಂಬ ವಿಚಾರದಲ್ಲಿ ಒಂದು ಒಪ್ಪಂದವಾಗಿತ್ತು ಎನ್ನುವುದು ಪೂಜಾರಪ್ಪ ಮತ್ತು ತನಗೆ ಮಾತ್ರ ಗೊತ್ತಿದ್ದ ವಿಷಯವಾಗಿತ್ತು. ಆದರೆ ಶಿವರುದ್ರಯ್ಯ ಗುಡಿ ಪೂಜಾರಿ ಕ್ರಿಷ್ಣಪ್ಪನ ಮುಖಾಂತರ ಹೇಳಿಸಿ ತನ್ನ ಉದ್ದೇಶ ಸಾಧನೆಗೆ ಮುಂದಾಗಿದ್ದ. ಕ್ರಿಷ್ಣಪ್ಪ ಉದ್ದೇಶದ ಮೂಲವನ್ನು ಪೂರ್ತಿಯಾಗಿ ಹೇಳದೆ ಪರವಾಗಿ ಎನ್ನುವಂತೆ ಹೇಳಿ ಶಾರವ್ವನನ್ನು ಒಪ್ಪಿಸಿದ್ದ.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎನ್. ಜಗದೀಶ್ ಕೊಪ್ಪ ಬರೆದ ಕತೆ

ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತಹ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರು ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು. ಡಾ. ಎನ್. ಜಗದೀಶ್ ಕೊಪ್ಪ ಬರೆದ ಕಥೆ

Read More

ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ

“ಆ ಮುದ್ಕ ಸಂಕ್ರಪ್ಪ ದೇವಮ್ಮಕ್ಕನ ಗಂಡನೇ ಅಲ್ವಂತೆ. ಅವನೂರಾಗೆ ಬ್ಯಾರೆ ಸಂಸಾರ ಅದೆ. ಈವಮ್ಮಂಗೂ ಮಕ್ಕಳು ಮರಿ ಅವೆ. ಈ ವಯಸ್ನಾಗೆ ಈವಪ್ಪನ ಹಿಂದೆ ಓಡ್‌ಬಂದದೆ. ಸಂಕ್ರಪ್ಪಂಗೆ ರಿಟೈರ್ ಆಯ್ತಂತೆ. ಅದಕ್ಕೇ ಈಗ ಆವಯ್ಯನ್ನ ಬಿಟ್ಟು ಇನ್ನೆತ್ಲಾಗೋ ಹೋಗದೆ; ಘಾಟಿ ಹೆಂಗ್ಸು’ ಓನರ್ ಆಂಟಿಯಂತೂ ತಿಂಗಳೊಪ್ಪತ್ತು ಹೊಸರಾಗ, ಹಳೆರಾಗ ಎಲ್ಲವನ್ನೂ ಬೆರೆಸಿ ಹಾಡಿದರು. ಅಷ್ಟೆಲ್ಲ ಅಕ್ಕರೆಯ ಒರತೆಯಾಗಿರುವ ದೇವಮ್ಮಕ್ಕನ ನಿಜ ಬಣ್ಣ ಹೀಗಿರಬಹುದಾ ಎಂಬ ಅಚ್ಚರಿ ಮಲ್ಲಿಕಾಳಿಗೆ. ವಿಜಯಶ್ರೀ ಹಾಲಾಡಿ ಬರೆದ ಕತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ