Advertisement

Category: ಸಾಹಿತ್ಯ

“ನಟನೆ”: ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನೀ ಕತೆ

“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.”

Read More

ಶೂದ್ರ ಶ್ರೀನಿವಾಸ್ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ.”

Read More

ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ

“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ