Advertisement

Category: ಸಾಹಿತ್ಯ

ದೀಪ್ತಿ ಭದ್ರಾವತಿ ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಬರೆದ ಮುನ್ನುಡಿಯ ಮಾತುಗಳು

“ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ…”

Read More

ತಬ್ಬಲಿಗಳು: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕತೆ

“ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು.”

Read More

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಂದೆ”

“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.”

Read More

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಳಗಿ ಬರೆದ ಮುನ್ನುಡಿ

“ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ