Advertisement

Category: ಅಂಕಣ

ಆತಿಥ್ಯದ ಮುಖಗಳು: ಎಸ್. ನಾಗಶ್ರೀ ಅಜಯ್ ಅಂಕಣ

ಮಾತಾಡಿದರೂ ಅಂತಸ್ತು ಪ್ರದರ್ಶಿಸುವ, ತಾವೆಷ್ಟು ಅನುಕೂಲಸ್ಥರು, ಬುದ್ಧಿವಂತರು, ಜಗದ ಎಲ್ಲ ಸಮಾಚಾರ ಬಲ್ಲವರು ಎಂಬ ಒಣಪ್ರತಿಷ್ಠೆ ತೋರ್ಪಡಿಸುವ ಪ್ರಚಾರತಂತ್ರದ ಗಿಮಿಕ್ಕು ಮಾತ್ರವೇ. ಗಂಡ-ಹೆಂಡತಿ ಮನೆಯಲ್ಲಿ ಕಾದಾಡುವ ಬದಲು ಅಲ್ಲಿ ಕಣ್ಣಲ್ಲೇ ಗುರಾಯಿಸ್ತಾ, ‘ನಿಂಗಿದು ಬೇಕಿತ್ತಾ ಮಗನೆ?’ ಎಂಬ ಸಂದೇಶ ರವಾನಿಸುತ್ತಾ ಕಾಲ ತಳ್ಳಬೇಕು. ಸದ್ಯ ಗಂಟೆಗೆ ಅರವತ್ತೇ ನಿಮಿಷ ಅನ್ನಿಸುವಾಗಲೇ ತರಬೇತುಗೊಂಡ ನಾಯಿಯಂತೆ ಊಟ, ತಿಂಡಿ, ಕಾಫಿ ವಾಸನೆ ಹಿಡಿದು ಊಟದ ಆಟ ಮುಗಿಸಿ, ತಾಂಬೂಲ ಪಡೆದು ‘ಬರ್ತೀವಿ’ ಎನ್ನಬೇಕು. ‌’ಸಂತೋಷ’ ಎನ್ನುವರು. ಅದು ಬಂದಿದ್ದಕ್ಕೋ ಹೊರಟಿದ್ದಕ್ಕೋ ಯೋಚಿಸದೆ ಮನೆಯ ದಾರಿ ಹಿಡಿಯಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

Read More

ಕನ್ನಡ –ಇಂಗ್ಲಿಷ್ ಅನುವಾದಗಳಲ್ಲಿ ಪದ ಕಚಗುಳಿ: ಸುಮಾವೀಣಾ ಸರಣಿ

ಇತ್ತೀಚೆಗೆ ಕೆಪಿಎಸ್ಸಿ ಪೂರ್ವಭಾವೀ ಪರೀಕ್ಷೆ ನಡೆಯಿತು. ಆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅಚ್ಚಾಗಿದ್ದ ಪ್ರಶ್ನೆಗಳು ಸರಿ ಇದ್ದವು. ಅವೇ ಪ್ರಶ್ನೆಗಳು ಕನ್ನಡಕ್ಕೆ ಅನುವಾದ ಮಾಡುವಾಗ ದೋಷಗಳು ಸಂಭವಿಸಿದ್ದವು. ಆದಕಾರಣ ಪರೀಕ್ಷೆಯನ್ನೆ ರದ್ದುಮಾಡಿ ಇಲ್ಲವಾದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರನ್ನು ಪಾಸು ಮಾಡಿ ಎನ್ನುವ ಬೇಡಿಕೆಗಳು ಬಂದವು. ಕಳೆದ ಶನಿವಾರದ ವರದಿಯ ಪ್ರಕಾರ ಪೂರ್ವಭಾವಿ ಪರೀಕ್ಷೆಯ ಗೊಂದಲಗಳು ಇತ್ಯರ್ಥವಾಗುವವರೆಗೆ ಮುಖ್ಯ ಪರೀಕ್ಷೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಅಲ್ಲೊಂದು ವೇಲ್ ಸಾವು, ಇಲ್ಲೊಂದು ಪಟಾಕಿ ಸಿಡಿತ: ಡಾ. ವಿನತೆ ಶರ್ಮ ಅಂಕಣ

ಈ ವಾರದ ಕೊನೆಯಲ್ಲಿ – ಶುಕ್ರವಾರ – ಬೇರೊಂದು ಹೊಸ ಕಥೆ ಶುರುವಾಗಿದೆ. ಇದು ಮನುಷ್ಯರಿಗಿರುವ ‘ತಾನೇ ಮೇಲು’ ಅನ್ನೋ ಅಹಂಭಾವ ಸೂಚಕ ಕಥೆ. ಚೈನಾ ದೇಶಕ್ಕೆ ಸೇರಿದ ಮೂರು ಯುದ್ಧ ನೌಕೆಗಳು ಆಸ್ಟ್ರೇಲಿಯಾದ ಟಾಸ್ಮನ್ ಸಮುದ್ರಪ್ರದೇಶದಲ್ಲಿ ‘ಲೈವ್-ಫೈರ್’ ಕಸರತ್ತು ನಡೆಸಿವೆ. ಅಂದರೆ ತಮ್ಮ ನೌಕೆಗಳಿಂದ ಆಕಾಶದಲ್ಲಿ ಸುಮಾರು ಐವತ್ತು ಸಾವಿರ ಅಡಿ ಎತ್ತರಕ್ಕೆ ಯುದ್ಧಾಯುಧಗಳನ್ನು ಚಿಮ್ಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ತಂತಿ ಮೇಲೆ ನಡೆದು ಮುಳ್ಳು ತೆಗೆದವರು: ಎಲ್.ಜಿ.ಮೀರಾ ಅಂಕಣ

ಮಾರನೆಯ ದಿನ ಬೆಳಿಗ್ಗೆ ಮಹೇಶ್ ನಾಯ್ಡು ಬಂದಾಗ ಅವನನ್ನು ಕಾಲೇಜಿನ ಮೈದಾನದ ದೂರದ ಒಂದು ಕಲ್ಲುಬೆಂಚಿಗೆ ಕರೆದುಕೊಂಡು ಹೋಗಿ ಆತ ಮಾಡಿದ ತಪ್ಪು ಕೆಲಸದ ಬಗ್ಗೆ ಮತ್ತು ಇದು ಇಡೀ ಕಾಲೇಜಿಗೆ ಗೊತ್ತಾದರೆ ತಾನು ಯಾವ ಪರಿಸ್ಥಿತಿಯಲ್ಲಿರಬಹುದು ಎಂದು ಊಹಿಸುವಂತೆ ಅವನಿಗೆ ಹೇಳಿದರು. ಮೊದಮೊದಲು ತಾನು ಏನೂ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತ ನಂತರ ಕಾಂತಿ ಮೇಡಂರ ಗಂಭೀರ ಮುಖ ಮತ್ತು ತೂಕವಾದ ಮಾತುಗಳ ಮುಂದೆ ನಿರುತ್ತರನಾದ, ಮತ್ತು ತಾನು ಆ ಪದ ಬಳಸಿದ್ದು ತಪ್ಪು ಎಂದು ಒಪ್ಪಿಕೊಂಡ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿಮೂರನೆಯ ಬರಹ

Read More

ಹೊಸವರ್ಷ, ಹೊಸಜೀವನದ ಮಜಲುಗಳು: ವಿನತೆ ಶರ್ಮ ಅಂಕಣ

ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ