Advertisement

Category: ಅಂಕಣ

ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ವಿಶ್ವ ಕಪ್ 2023ರ ಮಾಹಿತಿಗಳು(2): ಇ.ಆರ್.‌ ರಾಮಚಂದ್ರನ್‌ ಅಂಕಣ

ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್‌ಗೆ ಸಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್‌ನ ಕುರಿತ ಬರಹ ನಿಮ್ಮ ಓದಿಗೆ

Read More

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್‌ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು

Read More

ನೋಡಿ ಕಲಿ…: ಗುರುಪ್ರಸಾದ್‌ ಕುರ್ತಕೋಟಿ ಅಂಕಣ

ಎಷ್ಟೋ ವರ್ಷ ಹಳೆಯದಾದ ಮರಗಳನ್ನು ತೋಟ ಮಾಡುವಾಗ ಕಡಿದು ಹಾಕುವವರನ್ನು ಕಾಣುತ್ತೇವೆ. ಆ ಮರಗಳು ಹಿಂದಿನವರು ಹಾಕಿ ಪೋಷಿಸಿದ್ದು. ಅವುಗಳು ಗಾಳಿ ತಡೆಗೆ, ನೀರು ಭೂಮಿಯೊಳಕ್ಕೆ ಇಂಗುವುದಕ್ಕೆ, ಮಣ್ಣಿನ ಸವೆತದ ತಡೆಗೆ, ಗೊಬ್ಬರಕ್ಕೆ ಹಾಗೂ ಮುಚ್ಚಿಗೆಗೆ ಎಷ್ಟೊಂದು ಸಹಾಯ ಮಾಡಬಲ್ಲವು. ಆದರೂ ಅರಿಯದೆಯೋ, ಅರಿತೋ ಅವುಗಳನ್ನು ಉಳಿಸಿಕೊಳ್ಳುವ ಜನರು ತುಂಬಾ ಕಡಿಮೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ವಸಂತನು ತರುವ ಹಬ್ಬಗಳ ಬಣ್ಣದೋಕುಳಿ!: ವಿನತೆ ಶರ್ಮ ಅಂಕಣ

ಈ ಸೌತ್ ಬ್ಯಾಂಕ್ ಎನ್ನುವುದು ಒಂದು ಮನರಂಜನಾ ತಾಣವಾಗಿ ರೂಪುಗೊಂಡಿದೆ. ಮಕ್ಕಳು, ದೊಡ್ಡವರು, ಕುಟುಂಬಗಳು, ಪ್ರೇಮಿಗಳು, ವಿಹಾರಿಗಳಿಗೆ ಎಲ್ಲರಿಗೂ ಇಲ್ಲಿ ಅವರವರಿಗೆ ಬೇಕಾದಂತೆ ಹುಲ್ಲುಗಾವಲು, ನಡಿಗೆ ಹಾದಿ, ತರಕಾರಿ ಕೈತೋಟ, ಹೂತೋಟ, ಮಕ್ಕಳನ್ನು ಮನರಂಜಿಸುವ ನೀರಿನ ಕಾರಂಜಿ, ಈಜುಕೊಳ ಮುಂತಾದವು, ದೊಡ್ಡವರಿಗೆ ಇರುವ ಸರೋವರ ಎಲ್ಲವೂ ಇದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿವಿಧ ಹಬ್ಬಗಳ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ