Advertisement

Category: ದಿನದ ಅಗ್ರ ಬರಹ

ಇಸ್ಕೂಲ್ ಅನ್ನೋ ವಿಸ್ಮಯಲೋಕ: ಸುಮಾ ಸತೀಶ್ ಸರಣಿ

ಶಾಲೆ ಹಿಂಭಾಗದಲ್ಲಿ ಆಟದ ಮೈದಾನವಿತ್ತು. ಸಂಜೆ ಶಾಲೆ ಬಿಟ್ಟ ಮೇಲೆ ಮನೇಲಿ ಚೀಲ ಇಟ್ಟು, ಒಂದಿಬ್ಬರು ಗೆಳತೀರ ಜೊತೆ ಮತ್ತೆ ಇಸ್ಕೂಲಿಗೆ ಬಂದು ಹಳದಿ ಪಟುಕದ ಮೊಗ್ಗು ಕೀಳೋದು. ನಮ್ ತೋಟ್ದಲ್ಲಿ ತರಹೇವಾರಿ ಹೂವಿನ ಗಿಡವಿದ್ರೂ ಇದ್ರ ಮೇಲೇ ಕಣ್ಣು. ಪೈಪೋಟಿ ಮೇಲೆ ಮೊಗ್ಗು ಕೊಯ್ಯೋದು. ಗಿಡದ ತುಂಬಾ ಮುಳ್ಳುಗಳು. ‌ಕೈ ಎಲ್ಲ ತರಚಿ ಹೋಗ್ತಿತ್ತು. ಅದರ ನೆದರೇ ಇರ್ತಿರಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಶಾಲಾದಿನಗಳ ಕುರಿತ ಬರಹ

Read More

ಬೆಂಗಳೂರು ವಸತಿ ಪುರಾಣ ಭಾಗ-2: ರಂಜಾನ್‌ ದರ್ಗಾ ಸರಣಿ

ಕೊನೆಗೂ ಇಬ್ಬರು ಯುವಕರು ನಂದಿನಿ ಲೇ ಔಟ್ ಫ್ಲ್ಯಾಟ್‌ಗೆ ಬಾಡಿಗೆಗೆ ಬಂದರು. ಅವರು ಗುಜರಾತ್ ಕಡೆಯವರು. ಬೆಂಗಳೂರಲ್ಲೇ ಬೆಳೆದವರು. ಅವರು ಕೇಬಲ್ ಟಿವಿ ವ್ಯವಹಾರಕ್ಕೆ ಮನೆ ಹಿಡಿಯಬೇಕಾಗಿತ್ತು. ಸ್ವಲ್ಪ ದಿನಗಳನಂತರ ಅಡ್ವಾನ್ಸ್ ಕೊಡುವುದಾಗಿಯೂ ತಿಳಿಸಿದರು. ಅವರಿಗೆ ಬಾಡಿಗೆಗೆ ಕೊಟ್ಟಾಯಿತು. ಆದರೆ ಅವರು ಸುಳ್ಳು ಹೇಳುತ್ತ ಮುಂದೂಡತ್ತ ಬಂದರು. ಕೊನೆಗೆ ಓಡಿ ಹೋದರು. ಬಹುಶಃ ಕೇಬಲ್ ಮಾಫಿಯಾಗೆ ಭಯ ಪಟ್ಟಿರಬಹುದು. ಅಲ್ಲದೆ ಮೋಸ ಮಾಡಿದ ಕಾರಣವೂ ಇರಬಹುದು. ಯಶಸ್ಸು ಸಾಧಿಸದೆ ಇದ್ದಾಗ ಹೀಗಾಗಿರಬಹುದು. ನನ್ನ ಗೋಳು ಮಾತ್ರ ತಪ್ಪಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 80ನೇ ಕಂತು ನಿಮ್ಮ ಓದಿಗೆ

Read More

ವೇಗಸ್ಸಿನಿಂದ ವಿಂಬಲ್ಡನ್‌ವರೆಗೆ: ಅಚಲ ಸೇತು ಬರಹ

ಫ್ರೆಂಚ್‌ ಓಪನ್ ಪಂದ್ಯಾವಳಿಯ ಕಡೆಯ ಆಟದಲ್ಲಿ ಅದೇನಾಯಿತೋ ಏನೋ ಟೋಫನ್ ಸರಿಯಾಗೇ ಕೂರದೆ ಕೆಳಗೆ ಜಾರುವಂತಾಗುತ್ತಿತ್ತು. ಪ್ರಾಣಪದಕವಾಗಿದ್ದ ತನ್ನ ಇಮೇಜನ್ನು ಕಾಪಾಡಿಕೊಳ್ಳುವ ಸಲುವಾಗಿ ಅತ್ತಿಂದಿತ್ತ ಜೋರಾಗಿ ಓಡಾಡಲು ಹೆದರಿ ಪ್ರತಿಷ್ಠಿತ ಚಾಂಪಿಯನ್ಷಿಪ್ಪನ್ನೇ ಕೈಬಿಟ್ಟಿದ್ದ! ಅದು ಅಂದಿನ ಕತೆ. ಗಂಭೀರವಾದ ಮನ ಮಂಥನದ ಮೂಲಕ ತನ್ನತನವ ಅಪ್ಪಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಅಳಿದುಳಿದ ಕೂದಲಿನ ಬೊಕ್ಕ ತಲೆಯನ್ನು ಚೊಕ್ಕವಾಗಿ ಬೋಳಿಸಿಕೊಂಡು ಸಾರ್ವಜನಿಕವಾಗಿ ಓಡಾಡತೊಡಗಿದ.
ಟೆನ್ನಿಸ್‌ ತಾರೆ ಲಾಸ್‌ ವೇಗಸ್‌ ಮೂಲದ ಆಂಡ್ರೆ ಅಗಸಿಯ ಕುರಿತ ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಅರಾಸೇ ಮತ್ತು ಆರ್‌ಕೆಶ್ರೀ ಜೊತೆಗಿನ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ

ರೂಮಿನ ತುಂಬಾ ಪುಸ್ತಕಗಳು, ಟೇಬಲ್ಲಿನ ಮೇಲೆ ಅರ್ಧ ಓದಿದ್ದ ಆರೆಂಟು ಅರೆ ತೆರೆದ ಪುಸ್ತಕ, ಅರ್ಧ ತೆರೆದುಕೊಂಡಿದ್ದ ಪೇಪರು, ರಟ್ಟಿನ ಪ್ಯಾಡ್ ಮೇಲೆ ಬರೆಯುತ್ತಿದ್ದ ಜೋಡಿಸಿದ್ದ ಹಾಳೆಗಳು, ಕ್ಯಾಪ್ ತೆಗೆದಿರಿಸಿದ ಎರಡು ಪೆನ್ನು, ಪಕ್ಕದಲ್ಲಿ ಕನ್ನಡ ಇಂಗ್ಲಿಷ್ ಡಿಕ್ಷನರಿ….. ಇದ್ದಕ್ಕಿದ್ದ ಹಾಗೆ ನನ್ನ ರೂಮಿನಲ್ಲಿ ಕೂತಿದ್ದೀನಿ, ಹರಡಿರುವ ಪುಸ್ತಕಗಳು ನಾನೇ ಹರಡಿದ್ದು, ಕ್ಯಾಪ್ ತೆಗೆದಿಟ್ಟವನು ನಾನೇ…. ಅನಿಸಿಬಿಟ್ಟಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಸ್ನೇಹದ ಕಡಲಲ್ಲಿ ಭಾವ ನಾವೆಯ ಪಯಣ: ರಾಮ್‌ಪ್ರಕಾಶ್‌ ರೈ ಸರಣಿ

ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್ ‘ಸಿನಿಮಾದ ವಿಶ್ಲೇಷಣೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ