Advertisement

Category: ದಿನದ ಪುಸ್ತಕ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು ಕೂಡ ಲ್ಯಾಂಡ್‌ ಬ್ಯಾಂಕ್‌ ಕೆಲಸದಲ್ಲಿ ಎಷ್ಟೇ ಹೊತ್ತು ತಡವಾದರೂ ಒಂದು ಸಲ ಸಂಜೆ ಅಂಗಡಿಗೆ ಹೋಗಿ, ಸಾಮಾನು, ಕ್ಯಾಶ್‌ ಎಲ್ಲ ಲೆಕ್ಕ ನೋಡಿ ತಮ್ಮನಿಗೆ ಸಹಾಯ ಮಾಡುತ್ತಿದ್ದ. ನೋಡಿ, ಈಗಿನ ಕಾಲದಲ್ಲೂ ಇಂತಹ ಗುಣವಂತ, ನೀತಿವಂತ ಹುಡುಗರು ಇರುತ್ತಾರಾ ಅಂತ ಕಿರಂಗೂರಿನ ಸಮಸ್ತ ಪ್ರಜೆಗಳಿಗೆ ಕೊನೇ ಪಕ್ಷ ಮೂರು ನಾಲ್ಕು ಸಲವಾದರೂ ಗೋದಾದೇವಿ ಹರಿಕತೆ ಮಾಡಿ ತಿಳಿಸಿದ್ದಳು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ಅಂಪೈರ್‌ ಮೇಡಂ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಸಾಕುನಾಯಿಗಳೊಂದಿಗಿನ ಅನನ್ಯ ಮೈತ್ರಿ…: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ ಬರಹ

ಅದೊಂದು ಶನಿವಾರ. ರಾಮು ನಾಯಿ ಉಪವಾಸ ಮಾಡುತ್ತದೆ. ಇಡೀ ದಿನ ಯಾವ ಆಹಾರ ಕೊಟ್ಟರೂ ತಿನ್ನುವುದಿಲ್ಲ. ಮನೆಯ ಸದಸ್ಯರು ವಾರದ ಉಪವಾಸ ಮಾಡುತ್ತಿದ್ದರು. ಅದನ್ನು ಅನುಕರಣೆ ಮಾಡಿ ನಾಯಿಯೂ ಉಪವಾಸ ಮಾಡಿರಬಹುದು. ಬಾಲಕರು ಮನೆಯಿಂದ ಹೊರಗೆ ಹೊರಟರೆ ಅವರಿಗೆ ಬೆಂಗಾವಲಾಗಿ ಹಾಗೂ ಮನೆಗೆ ಮಕ್ಕಳನ್ನು ವಾಪಸ್ಸು ಕರೆತರಲು ನಾಯಿಗಳು ಅವರನ್ನು ಹಿಂಬಾಲಿಸಿ ಹೊರಟುಬಿಡುತ್ತಿದ್ದವು. ಮಕ್ಕಳಿಗೆ ಮನೆಯ ದಾರಿ ತಿಳಿಯದಾದಾಗ ಮುದ್ದುನಾಯಿಗಳು ದಾರಿ ತೋರಿಸುತ್ತಾ ಮನೆಗೆ ಕರೆತಂದ ಸಂದರ್ಭವಿದೆ.
ವೇದವತಿ ಕೋದಂಡರಾಮ್ ತಮ್ಮ ಮನೆಯ ಸಾಕುಪ್ರಾಣಿಗಳ ಕುರಿತು ಬರೆದ “ಯಾವ ಜನ್ಮದ ಮೈತ್ರಿ” ಕೃತಿಯ ಕುರಿತು ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ ಬರಹ

Read More

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ.
ಶ್ರುತಿ ಬಿ.ಆರ್.‌ ಕಥಾಸಂಕಲನ “ಎಲ್ಲೆಗಳ ದಾಟಿದವಳು” ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ ಇಲ್ಲಿದೆ

Read More

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ ಪತ್ರವಿದೆಯಲ್ಲ ಅದು ಒಬ್ಬ ಆದರ್ಶ ತಂದೆ ತನ್ನ ಮಗಳ ಕುರಿತ ಅಪರಿಮಿತ ಅಪ್ಯಾಯತೆ ಮತ್ತು ಕಾಳಜಿಯಿಂದ ಮಾಡಿದ ಕೆಲಸವೆಂದೇ ನನ್ನ ದೃಢಭಾವನೆ. ಈ ಪತ್ರಗಳು ಒಮ್ಮೊಮ್ಮೆ ಖಂಡಕಾವ್ಯದಂತೆಯೂ ಭಾಸವಾಗಿದ್ದು ನನಗೆ ಆಶ್ಚರ್ಯ ಹುಟ್ಟಿಸಿದೆ.
ಎಂಕೆ ಗಾಂಧಿ ರಚಿತ “ಪ್ರಿಯ ಮೀರಾ” ಬಾಪು ಮಗಳಿಗೆ ಬರೆದ ಪ್ರೇಮ ಪತ್ರಗಳನ್ನು ಮಂಜುನಾಥ್‌ ಚಾಂದ್‌ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ದೀಪಾ ಗೋನಾಳ ಬರಹ

Read More

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ ಸೂಕ್ಷ್ಮಗಳನ್ನು ಗಮನಿಸ ಬಹುದು. ಅಜಿತ್ ಅವರ ಕಥನದ ಹಿರಿಮೆಯೆಂದರೆ ಅವರಿಗೆ ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆ. ಕಥನದ ಹಲವು ನೆಲೆಗಳನ್ನು ಅವರು ಮುಕ್ತವಾಗಿರಿಸಿ ಅವು ಓದುಗರ ಮನೋಭೂಮಿಕೆಯಲ್ಲಿ ಬೆಳೆಯಲು ಬಿಡುತ್ತಾರೆ. ‘ತುಂಬೀತೆ ಒಲವು’ ಈ ನೆಲೆಯಲ್ಲಿ ಬಹು ಯಶಸ್ವಿಯಾದ ಕಥೆ.
ಡಾ. ಅಜಿತ್‌ ಹರೀಶಿ ಹೊಸ ಕಥಾ ಸಂಕಲನ “ಉಪರಿ”ಯ ಕುರಿತು ಎನ್.ಎಸ್.ಶ್ರೀಧರ ಮೂರ್ತಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ