Advertisement

Category: ದಿನದ ಪುಸ್ತಕ

ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ

ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

Read More

ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಎದೆ ಸೀಳಿತು ಕೆಂಪುಲಾವದ್ಹಕ್ಕಿ…: ಗೋಳೂರ ನಾರಾಯಣಸ್ವಾಮಿ ಬರಹ

“ಪ್ರೀತಿಸುವುದಕ್ಕಿಂತ ಕ್ರಾಂತಿಯಾವುದಾದರೂ ಇದಿಯಾ; ನನ್ನ ಕವಿತೆ ಇದನ್ನಷ್ಟೇ ಬಯಸುತ್ತದೆ” ಎನ್ನುವಾಗ, ಜಂಬೂದ್ವೀಪದ ಅಪ್ಪ ಅವ್ವ ಅನ್ನ ಉತ್ಪಾದಿಸುವ ಘನಕಾರ್ಯಕ್ಕೆ ಕಣ್ಣು ಬಂದು, ಅದೆಲ್ಲೋ ಬಲೂನು ಮಾರುತ್ತಿರುವ ಬಡಜನರ ಮೇಲೆ ದೃಷ್ಟಿ ಹಾಯಿಸುತ್ತಾ ಇರುತ್ತದೆ. ಒಂದೇ ಮನೆಯಲ್ಲಿದ್ದು, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಜನರೇ ಹಣ, ಆಸ್ತಿ ಆಸೆಗಾಗಿ ಸಾವನ್ನೇ ಕತ್ತು ಹಿಸುಕಿ ಕೊಲ್ಲುತ್ತಿರುವಾಗ, ಬಡಜನರ ಬಗ್ಗೆ ದನಿಯಾಗಬೇಕೆಂಬ ಇವರ ಹುಂಬುತನಕ್ಕೆಷ್ಟೊಂದು ಧೈರ್ಯವಿರಬೇಕು ಎಂದುಕೊಳ್ಳುವಾಗಲೆ, ಅದಕ್ಕವರು ಉತ್ತರವಾಗಿ ‘ನದಿಗೆ ತಡೆಯೊಡ್ಡಬಹುದು, ಬತ್ತಿಸಲಾಗುವುದೇ ಒಳಗಿನ ಒರತೆ” ಎಂದುಬಿಡುತ್ತಾರೆ.
ಎಸ್.ಕೆ. ಮಂಜುನಾಥ್‌ ಕವನ ಸಂಕಲನ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕುರಿತು ಗೋಳೂರ ನಾರಾಯಣಸ್ವಾಮಿ ಬರಹ

Read More

‘ಅವಳ ಪಥ’ದ ಹಲವು ಪದರಗಳು: ಡಾ. ಎಲ್.ಜಿ. ಮೀರಾ ವಿಮರ್ಶೆ

ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ.
ಚೇತನಾ ಹೆಗಡೆ `ಅವಳ ಪಥ’ ಕೃತಿಯ ಕುರಿತು ಡಾ. ಎಲ್.ಜಿ. ಮೀರಾ ಬರಹ ನಿಮ್ಮ ಓದಿಗೆ

Read More

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ