Advertisement

Category: ದಿನದ ಪುಸ್ತಕ

‘ಏನು ಜನ, ಎಂಥ ಗಾನ’ ಪುಸ್ತಕದ ಕುರಿತು ಶ್ರೀಮತಿ ದೇವಿ ಬರಹ

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ.
ಅರವಿಂದ ಗಜೇಂದ್ರಗಡಕರ್ ಅವರ ಮರಾಠಿ ಕೃತಿಯನ್ನು ದಮಯಂತಿ ನರೇಗಲ್ಲ “ಏನು ಜನ ಎಂಥಾ ಗಾನ” ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತು ಶ್ರೀಮತಿ ದೇವಿ ಬರೆದಿದ್ದಾರೆ

Read More

ಮುಗ್ಧತೆಯಿಂದ ಪ್ರಬುದ್ಧತೆಯ ಕಡೆಗಿನ ಪಯಣದ ಕತೆಗಳು

ಇಂತಹ ಕಥನಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದುದು. ಸ್ವಲ್ಪ ಎಡವಟ್ಟಾದರೆ ಕತೆ ಹೋಗಿ ಪ್ರಬಂಧವಾಗಿ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಅನಿಲ್ ಗುನ್ನಾಪೂರ ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಂಥದ್ದೊಂದು ಅಪಾಯಕಾರಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಲ್ಲಿನ ಕತೆಯ ನಿರೂಪಕನೊಂದಿಗೆ ತಮ್ಮನ್ನು ಸಮೀಕರಿಸಿಕೊಂಡಂತಿರುವ ಲೇಖಕನ ಕುತೂಹಲ, ಅವನ ಗೆಳೆಯ ಗೌತಮನ ದಿಟ್ಟತನ ಹಾಗೂ ಮುದುಕಿಯ ಅಂತಃಕರಣ ಈ ಮೂರರ ಹದವಾದ ಮಿಶ್ರಣ ಕತೆಗೆ ಒಂದು ತೆರನಾದ ನಯಗಾರಿಕೆಯನ್ನು ತಂದುಕೊಟ್ಟಿವೆ.
ಅನಿಲ್‌ ಗುನ್ನಾಪೂರ ಬರೆದ ‘ಕಲ್ಲು ಹೂವಿನ ನೆರಳು’ ಹೊಸ ಕಥಾಸಂಕಲನಕ್ಕೆ ಚನ್ನಪ್ಪ ಕಟ್ಟಿ ಬರೆದ ಮಾತುಗಳು

Read More

ತಾತ್ವಿಕತೆ ನಿರಾಕರಣೆಯ ಮಾಯಾಲೋಕ

ಕುಂಟಿನಿಯ ಕತೆಗಳು ಕೆಲವೊಮ್ಮೆ ಈ ಕಾಲದ್ದಾದರೂ ಅವಧೂತರ ಆಧ್ಯಾತ್ಮಿಕ ವಿಲಾಸವನ್ನು ಹೊತ್ತಿರುತ್ತವೆ; ಜಲಾಲುದ್ದೀನ್‌ ರೂಮಿಯ ಕತೆಗಳನ್ನು, ಸೂಫಿ- ಝೆನ್‌ ಕತೆಗಳನ್ನು ನೆನಪಿಸುತ್ತವೆ. ಕೆಲವೊಮ್ಮೆ ಅತ್ಯಂತ ಪುರಾತನವೆನಿಸುವ ಇಂಥ ಕತೆಗಳಲ್ಲೇ ಹೊಸದೆನಿಸುವ ಕಾಣ್ಕೆಗಳನ್ನು ಕಾಣಿಸಬಲ್ಲ ಆಧುನಿಕ ಮನಸ್ಸೊಂದು ಮಿಡಿಯುತ್ತಿರುತ್ತದೆ. ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ.
ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಪುಸ್ತಕ ‘ಮಾರಾಪು’ ಸಂಕಲನಕ್ಕೆ ಹರೀಶ್‌ ಕೇರ ಬರೆದ ಮುನ್ನುಡಿ

Read More

ಮೊದಲ ಮಹಿಳಾ ಭಾಗವತರ ಆತ್ಮಕಥೆಯ ಒಂದೆರಡು ಪುಟಗಳು

ಪುರುಷರ ಪ್ರಾಬಲ್ಯವೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಮಹಿಳೆಯರು ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರಾಗಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಐದು ದಶಕಗಳ ಹಿಂದೆಯೇ ಲೀಲಾವತಿ ಬೈಪಡಿತ್ತಾಯರು  ಮಹಿಳಾ ಭಾಗವತರಾಗಿ ರಂಗಸ್ಥಳದಲ್ಲಿ ಪಡಿಯೇರಿದ್ದಷ್ಟೇ ಅಲ್ಲದೆ, ಮೇಳದ ತಿರುಗಾಟಕ್ಕೂ ಸೈ ಎಂದವರು. ಯಕ್ಷಗಾನ ಕ್ಷೇತ್ರದ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯರ ಜೀವನ ಕಥನವನ್ನು ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ  ನಿರೂಪಿಸಿದ್ದಾರೆ. ‘ಯಕ್ಷಗಾನ ಲೀಲಾವಳಿ’ ಎಂಬ ಆ ಕೃತಿಯು ಕೇವಲ ಆತ್ಮಕಥೆಯಷ್ಟೇ ಆಗಿರದೆ, ಯಕ್ಷಗಾನದ ಇತರ ಆಯಾಮಗಳನ್ನೂ ತೆರೆದಿಡುವ ಕೃತಿ. ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

Read More

“ಆತ್ಮ ಧ್ಯಾನವೇ ಬುತ್ತಿಯಾದ ಕ್ಷಣ”

ಪುಸ್ತಕ ಕೆಳಗಿಡುವಾಗ ‘ನಾಗೇಶಿ’ ಒಬ್ಬ ಆಪ್ತ ಸಖನಾಗಿ ಎದೆಹೊಕ್ಕಿಬಿಡುತ್ತಾನೆ. ಲೌಕಿಕದ ಬದುಕು ತೋರುವ ವಿಭಿನ್ನ ಮುಖಗಳ ಕರಾಳತೆಯ ದರ್ಶನದೊಂದಿಗೆ ಹೇಗೆ ಅವನ್ನು ಮೆಟ್ಟಿ ನಿಂತು ಅಲೌಕಿಕದತ್ತ ಸಾಗಬೇಕೆಂಬ ಪರಾಮರ್ಶೆಯಿದೆ. ಒಣ ಉಪದೇಶ ಕೊಡುವ ಒಂದೂ ಸಾಲಿರದ, ಆದರೆ ನಮ್ಮೊಳಗೆ ನಾವೇ ಇಳಿದು ತಿದ್ದಿಕೊಳ್ಳಬಹುದಾದ ಒಂದು ಪ್ರಚೋದನೆ ಇಲ್ಲಿದೆ. ಕೊನೆಯಲ್ಲಿ ಬದುಕಿನ ಮಾದರಿ ಹೇಗಿರಬೇಕು ಎಂಬ ಸೂಕ್ಷ್ಮದರ್ಶನಗೈವ ಈ ಗಜಲ್ಲುಗಳು ಖಂಡಿತ ಖುಷಿ ಕೊಡುವ, ಎಲ್ಲ ಬೇಸರದ ಕ್ಷಣಗಳಿಗೂ ಜೊತೆಯಾಗಿ ಜೀವದ್ರವ್ಯ ಸಿಂಪಡಿಸುವ ಸಖರಂತೆ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ.
ನಾಗೇಶ್ ನಾಯಕ ಅವರ “ಆತ್ಮ ಧ್ಯಾನದ ಬುತ್ತಿ” ಗಝಲ್‌ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ