Advertisement

Category: ಪುಸ್ತಕ ಸಂಪಿಗೆ

ಓದಿನ ಧ್ಯಾನದ ನಂತರವೂ ಕಾಡುವ ಕತೆಗಳು: ಮಾರುತಿ ಗೋಪಿಕುಂಟೆ ಬರಹ

ಅರ್ಧ ನೇಯ್ದಿಟ್ಟ ಸ್ವೆಟರ್ ಯೋಧನ ಕುಟುಂಬದ ಬದುಕಿನ ಅನಾವರಣ. ಇಲ್ಲಿ ಮಹಿಳೆಯೊಬ್ಬಳ ಮಾನಸಿಕ ತುಮುಲಗಳ ಸಾಮಾಜಿಕ ಬೇಕು ಬೇಡಗಳ ಒಳಗೊಳ್ಳುವಿಕೆ ಮತ್ತು ಅದನ್ನು ಮೀರುವ ಆಕೆಯ ಕನಸು ಹರಿಯನ್ನು ಕಾಣುವ ತವಕದೊಂದಿಗೆ ಮೂರ್ತರೂಪ ಪಡೆದು ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.
ಸದಾಶಿವ ಸೊರಟೂರು ಅವರ ಕಥಾ ಸಂಕಲನ “ಧ್ಯಾನಕ್ಕೆ ಕೂತ ನದಿ”ಯ ಕುರಿತು ಮಾರುತಿ ಗೋಪಿಕುಂಟೆ ಬರಹ

Read More

ಪೆಣ್ಣೆತ್ತ ಖುಷಿಯನು ಲೋಕಕೆ ಹಂಚಿ…: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವಂತೆ ಇಂತಹ ಎಷ್ಟು ಸಾಹಿತ್ಯ ರಚನೆಯಾದರೂ ಹೆಣ್ಣಿನ ಕುರಿತಾದ ಸಮಾಜದ ಮನಸ್ಥಿತಿ ಬದಲಾಯಿಸಲು ಆಗುತ್ತಿಲ್ಲ. ಎಷ್ಟೋ ಹೆಣ್ಣೆತ್ತ ತಂದೆ – ತಾಯಿಯರಿಗೆ ಹೆಣ್ಣನ್ನು ಹೆತ್ತಿದ್ದೇವೆ ಎನ್ನುವ ನೋವಿಗಿಂತಲೂ ಹೆಣ್ಣೆತ್ತವರನ್ನು ಸಮಾಧಾನ ಮಾಡುವ ಸೋಗಿನಲ್ಲಿ ಆಡುವ ಮಾತುಗಳ ನೋವೇ ಹೆಚ್ಚೆಂಬುದನ್ನು ದೇಸಾಯಿಯವರು ಬಹಳ ವಿಶೇಷವಾಗಿ ಹಾಸ್ಯ ಮಿಶ್ರಿತಗೊಳಿಸಿ ಹೇಳಿದ್ದಾರೆ.
ಗುಂಡುರಾವ್ ದೇಸಾಯಿ ಲಲಿತ ಪ್ರಬಂಧಗಳ ಕೃತಿ “ಪೆಣ್ಣೆತ್ತ ಖುಷಿಗೆ.. ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

Read More

ನಾರಿಯೊಡಲಿನ ಬೇವು-ಬೆಲ್ಲ: ಎಂ.ಡಿ.ಚಿತ್ತರಗಿ ಬರಹ

ಒಂದೇ ಮಾದರಿಯ ಕವಿತೆಗಳ ಕಟ್ಟನ್ನು ಇಡೀ ಸಂಕಲನದುದ್ದಕ್ಕೂ ಪೋಣಿಸಿದ ಕವಯಿತ್ರಿ ಅವಸರದ ಗಾಡಿಯನೇರದೆ ನಿಧಾನಕ್ಕೆ ಚಕ್ಕಡಿ ಹತ್ತಿದವರು. ಕಾಲುಹಾದಿಯಲ್ಲಿ ಕಡಲ ಕಂಡವರು. ಅವರೇ ಹೇಳಿಕೊಂಡಂತೆ ಮೂವತ್ತು ವರ್ಷದ ಬದುಕಿನ ಅನುಸಂಧಾನದ ಪ್ರತಿಫಲವಾಗಿ, ಕಂಡುಂಡ ಅನುಭವದ ಕಡಲನ್ನೇ ಕಡೆಕಡೆದು ನಿಲ್ಲಿಸಿದ ಐವತ್ತೇಳು ಕವಿತೆಗಳ ಗುಚ್ಛವಿದು. ಸರಳವಾದ ಭಾಷೆಯಲ್ಲಿ ತೆರೆದುಕೊಳ್ಳುವ ಕವಿತೆಗಳು ಸಹಜವಾಗಿ ಓದುಗರ ಎದೆಗಿಳಿಯುತ್ತವೆ.
ಸಾವಿತ್ರಿ ಮಜುಮದಾರ ಕವನ ಸಂಕಲನ “ನಾರಿಪದ್ಯ”ದ ಕುರಿತು ಎಂ.ಡಿ. ಚಿತ್ತರಗಿ ಬರಹ

Read More

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ ಓದುಗರ ಮನಸನ್ನ ಉಲ್ಲಾಸಗೊಳಿಸುತ್ತದೆ. ಮೊದಲ ಪುಟದ ಓದು ಆರಂಭಿಸುತ್ತಿದ್ದಂತೆ ಹಳದಿ ಬಣ್ಣದ ಅಂಬರಿ ಹೂವಿನ ಪರಿಮಳದಲ್ಲಿ ಮನಸ್ಸು ಅರಳಿ ಕಥಾನಾಯಕನಾದ ಶಾಮ ನಮ್ಮನ್ನು ನಮಗರಿವಿಲ್ಲದೆ ಆವರಿಸಿಕೊಂಡು ಬಿಡುತ್ತಾನೆ ಅಷ್ಟು ಆಪ್ತತೆ ಈ ಕಾದಂಬರಿಯಲ್ಲಿದೆ.
ಮಂಡಲಗಿರಿ ಪ್ರಸನ್ನ ಬರೆದ “ಹಳ್ಳಿ ಹಾದಿಯ ಹೂವು” ಎಂಬ ಮಕ್ಕಳ ಕಾದಂಬರಿಯ ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

Read More

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು ಉತ್ತಮ ಮಾಧ್ಯಮ ಎಂದು ನಂಬಿರುವ ಲೇಖಕಿ ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಸಂಕಲನದಲ್ಲಿ ಅಂತಹ ಮಕ್ಕಳ ಮನ ತಟ್ಟುವ ರೀತಿಯ ಕನ್ನಡ ಪದ್ಯಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಮಕ್ಕಳ ಪದ್ಯಗಳ ಸಂಕಲನದ ಕುರಿತು ಮಂಡಲಗಿರಿ ಪ್ರಸನ್ನ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ