Advertisement

Category: ಸರಣಿ

ಮಸಲ್‌ ಮೆಮೊರಿ ಮತ್ತು ನಾವು….

ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ಮಾರುತಿ ಗೋಪಿಕುಂಟೆ ಹೊಸ ಸರಣಿ “ಬಾಲ್ಯದೊಂದಿಗೆ ಪಿಸುಮಾತು” ಆರಂಭ

ಮನೆಯಲ್ಲಿ ಬಹಳ ತುಂಟನಾಗಿದ್ದ ನನ್ನ ಕಾಟಕ್ಕೆ ನಮ್ಮಜ್ಜಿ ಇವನ್ನ ‘ಇಸ್ಕೂಲಿಗೆ ‘ಸೇರುಸ್ಬೇಕು ಮನೇಗಿದ್ರೆ ಯಾವಾಗಲೂ ಜಗಳ ಮಾಡ್ತಿರ್ತಾನೆ” ಎಂದು ದೂರು ಹೇಳುತ್ತಿದ್ದಳು. ನಮ್ಮಪ್ಪ ”ಆರು” ವರ್ಷದವರೆಗೂ ಇಸ್ಕೂಲಿಗೆ ಸೇರುಸ್ಕಮಲ್ಲ ಸುಮ್ನೆ ಯಾಕ್ ಬಡ್ಕೋಮ್ತೀಯ” ಎಂದು ಆಗಾಗ ಅಜ್ಜಿಯನ್ನೆ ಗದರಿಸುತ್ತಿದ್ದ. ಇವನ ವಾರಗೆಯವರೆಲ್ಲಾ ಇಸ್ಕೂಲಿಗೆ ಹೋಗ್ತಾರೆ ಇವನ ಕಾಟ ನಮ್ಗೆ ತಡೆಯೋಕಾಗಲ್ಲ ಎಂದು ಮನೆಯವರೆಲ್ಲರೂ ಹೇಳಿದಾಗ ಅಪ್ಪನಿಗೆ ಇದೆ ಸರಿ ಅನ್ನಿಸಿ ಇಸ್ಕೂಲಿಗೆ ಸೇರ್ಸೆಬಿಡೋಣ ಎಂದು ಶಾಲೆಗೆ ಕರೆದುಕೊಂಡು ಹೋಗೆಬಿಟ್ರು.
ಮಾರುತಿ ಗೋಪಿಕುಂಟೆ ಬರೆಯುವ ಹೊಸ ಸರಣಿ

Read More

ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ ಆರಂಭ

ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ ಹೊಸ ಸರಣಿ “ಹಳೆ ಬೆಂಗಳೂರ ಕಥೆಗಳು” ಇನ್ನು ಹದಿನೈದು ದಿನಗಳಿಗೊಮ್ಮೆ, ಶುಕ್ರವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ಹತ್ತನೆ ಶತಮಾನ: ಹಿಂದೂ ಸಂಸ್ಕೃತಿಯ ಮಹತ್ತರ ವಿಸ್ತಾರ

ಸಂಗಂ ಯುಗದಲ್ಲಿ ಅಶೋಕನ ಕಾಲಕ್ಕಿಂತಲೂ ಹೆಚ್ಚಿನ ಪ್ರಗತಿ ಕಲೆಯಲ್ಲುಂಟಾಯಿತು. ಪೂನಾದ ಸಮೀಪ ‘ಬಾಜʼ ಎಂಬಲ್ಲಿ ಕ್ರಿ.ಪೂ. ಇದೇ ಶತಮಾನದಲ್ಲಿ ಒಂದು ‘ವಿಹಾರ’ವನ್ನು ಕಡೆದಿರುವರು. ಈ ಕಲೆಯು ವಾಸ್ತವಿಕತೆಯಿಂದ ಕೂಡಿದೆ. ಮುಂಬಯಿಯ ಕಾರ್ಲೆ ಎಂಬಲ್ಲಿ ಕಲ್ಲಿನಿಂದಲೇ ಮಾಡಿದ ಚೈತ್ಯಾಲಯವು ಉತ್ಕೃಷ್ಟವಾಗಿದೆ. ಜುನಾರ್, ನಾಸಿಕ, ಅಜಂತ ಮುಂತಾದೆಡೆಗಳಲ್ಲಿಯೂ ಉತ್ತಮ ಚೈತ್ಯಾಲಯಗಳಿವೆ. ಕೆತ್ತನೆಯ ಕೆಲಸಗಳಿಂದ ಕೂಡಿದ ಬೃಹತ್ ಸ್ತೂಪದ ಹೆಬ್ಬಾಗಿಲು ಪ್ರಸಿದ್ಧವಾಗಿದೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಕೊನೆಯ ಬರಹ ಇಲ್ಲಿದೆ.

Read More

ನಮಗೇ ಯಾಕೆ ಹೀಗಾಗುತ್ತೆ?

ನಮಗೆ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲವೆಂದು ಕಾಣುತ್ತದೆ. ನಾವು ಜೀವನವನ್ನು, ಮನಷ್ಯರನ್ನು, ಬಂದ ಹಾಗೆ, ಅವರು ಇರುವ ಹಾಗೆ ಒಪ್ಪಿಕೊಳ್ಳುವ ನಮ್ರತೆಯನ್ನು ತೋರಿಸುವುದಿಲ್ಲ. ಎಲ್ಲ ಘಟನೆಗಳ ಮೇಲೂ ನಮ್ಮ ನಿಯಂತ್ರಣವಿರಬೇಕು, ಇರುತ್ತದೆ. ನಾವು ಇಷ್ಟಪಟ್ಟ ಹಾಗೆಯೇ ಜಗತ್ತು ನಡೆಯಬೇಕು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎಂಟನೆಯ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ