Advertisement

Category: ಸರಣಿ

ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ನಮ್ಮ ಕಾಲೋನಿಯ ಮೊದಲ ಸಾವು…

ನಮ್ಮ ಎದುರು ರಸ್ತೆಯ ಎಚ್ ಎಂ ಟಿ ಕೆಲಸಗಾರ ಗೋಪಾಲರಾವ್ ಎನ್ನುವವರು ಕೊಂಚ ಮೈ ಬಿಸಿ, ಜರ ಬಂದಿದೆ ಎಂದು ವೈದ್ಯರಿಗೆ ತೋರಿಸಲು ಹೋದರು. ವೈದ್ಯರು ಚಿಕಿತ್ಸೆ ನೀಡಬೇಕಾದರೆ ಅಂದರೆ ಇಂಜೆಕ್ಷನ್ ಕೊಟ್ಟಾಗ ಅವರ ಜೀವ ಹೋಯಿತು. ವೈದ್ಯರ ನಿರ್ಲಕ್ಷ್ಯ ಎಂದು ಕಾರ್ಮಿಕರು ಕೋಪಾವೇಶಗೊಂಡರು. ಈ ಎಸ್ ಐ ಆಸ್ಪತ್ರೆ ಮುಂದೆ ಕಾರ್ಮಿಕ ಸಾಗರ ನೆರೆಯಿತು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂರನೇ ಕಂತು ನಿಮ್ಮ ಓದಿಗೆ

Read More

ಹ್ಯಾಂಗರ್ಸ್‌ ಆನ್‌…..

ಬರಹಗಾರನಾಗಿ ನಾನು Hanger on ಸ್ಥಾನದ ಪಾತ್ರವನ್ನೇ ತುಂಬಾ ಇಷ್ಟಪಡುತ್ತೇನೆ. ಯಾರೂ ನಿಮ್ಮನ್ನು ಗಮನಿಸುವುದಿಲ್ಲ, ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೆಚ್ಚು ಜನ ನಿಮ್ಮನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಪರಿಗಣಿಸಿ ನಿಮ್ಮ ತಂಟೆಗೇ ಬರುವುದಿಲ್ಲ. ನಿಮ್ಮ ಸ್ವಾತಂತ್ರ್ಯ, ನಿಮಗೆ ಸಿಗುವ ಸಮಯ ಎಲ್ಲವೂ ಹೆಚ್ಚಾಗುತ್ತದೆ. ಎಲ್ಲರನ್ನೂ ನೀವು ನಿರಾಳವಾಗಿ ಗಮನಿಸಬಹುದು. ನಿಮಗೇ ಗೊತ್ತಿಲ್ಲದಂತೆ ನಿಮ್ಮ ವ್ಯಕ್ತಿತ್ವಕ್ಕೆ ಒಂದಕ್ಕಿಂತ ಹೆಚ್ಚು ಆಯಾಮಗಳು ಸಿಗುತ್ತವೆ. ನನ್ನ ಕುಟುಂಬದ ಸದಸ್ಯರು ಇದನ್ನೆಲ್ಲ ಒಪ್ಪುವುದಿಲ್ಲ. ಇದನ್ನು ಒಂದು ತಂತ್ರವೆಂದು ಭಾವಿಸುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೆರಡನೆಯ ಪ್ರಬಂಧ ನಿಮ್ಮ ಓದಿಗೆ

Read More

ಯುದ್ಧಕಾಲದ ಸಿಗಾರುಪ್ರಿಯ ನಾಯಕ

1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ನೆದರ್ಲ್ಯಾಂಡ್ಸ್‌ ಕಟ್ಟಿಕೊಟ್ಟ ಮರೆಯಲಾಗದ ನೆನಪುಗಳು…

ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್‌ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 60ನೇ ಕಂತು ನಿಮ್ಮ ಓದಿಗೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ