Advertisement

Category: ಸರಣಿ

ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ

ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.

Read More

ಬಲಿಪರ ಏರುಪದ್ಯಗಳ ಅನನ್ಯತೆ

ಯಕ್ಷಗಾನ ಕಲೆಯ ಹೊಸ ಪಲ್ಲವ ಯಕ್ಷಗಾಯನ. ಕೇವಲ ಗಾಯನಮಾತ್ರವೇ ಇರುವ ಯಕ್ಷಗಾನದ ಹೊಸ ಸಾಧ್ಯತೆ. ಇದನ್ನು ಯಕ್ಷಗಾನ ಭಾಗವತಿಕೆಯ ಅನನ್ಯತೆಯನ್ನು ತೋರಿಸಲು ಯಕ್ಷಗಾಯನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಬಹುದು. ಇದರಿಂದ ಭಾಗವತಿಕೆಯ ಶಕ್ತಿ ಮತ್ತು ಯಕ್ಷಗಾನದ ಹಾಡುಗಾರಿಕೆಯಲ್ಲಿನ ವಿಭಿನ್ನತೆಯನ್ನು ಚೆನ್ನಾಗಿ ತೋರಿಸಬಹುದೆಂಬುದು ಎನ್ನುವ ಅಭಿಮತ ಕಿರಿಯ ಬಲಿಪರದ್ದು. ಬಲಿಪಮಾರ್ಗ ಸರಣಿಯಲ್ಲಿ ಅವರ ಗಾಯನ ಶೈಲಿಯ ವಿಶ್ಲೇಷಣೆಯನ್ನು ಮಾಡಿದ್ದಾರೆ ಕೃಷ್ಣ ಪ್ರಕಾಶ್ ಉಳಿತ್ತಾಯ

Read More

ಚರ್ಚೆಗಳಲ್ಲಿ ರಸಸಿದ್ಧಾಂತ ಪಠ್ಯಗಳ ಪ್ರಮಾಣ

ಯಾವುದಕ್ಕೆ ಉತ್ತರ ಸಿಗುತ್ತಿಲ್ಲವೊ ಅದನ್ನು ಶಾಸ್ತ್ರ ಹೇಳುತ್ತದೆ ಅಂದ ಮೇಲೆ ಉತ್ತರ ಸಿಗದೇ ನಮಗೆ ಸಮಾಧಾನವಾಗುವ ಹಾಗೆ ಅಥವಾ ಮುಂದಿನ ಚರ್ಚೆ ತಾತ್ಕಾಲಿಕಯಾಗಿಯಾದರೂ ಕೊನೆಗೊಳ್ಳುವಂತೆ ರಸ ಸಿದ್ಧಾಂತವು ‘ಶಾಸ್ತ್ರ’ವಾಗುತ್ತದೆ. ಸಮಾಜದ ಎಲ್ಲ ಘಟಕಗಳಲ್ಲೂ ಮನುಷ್ಯ ವ್ಯವಹರಿಸುವಾಗ ಈ ‘ಶಾಸ್ತ್ರ’ಕ್ಕೆ  ಸಂವಾದಿಯಾಗುವ ಹಲವು ಪರಿಕರಗಳನ್ನು ಬಳಸಿ ಆ ಸಂದರ್ಭಕ್ಕೆ ಅಂತ್ಯ ಹಾಡುವುದು ಸಾಮಾನ್ಯವೇ.  ಇದೇ ಹಿನ್ನೆಲೆಯಲ್ಲಿ…

Read More

ನಮ್ ಶಾಲೆಗೆ ಬನ್ನಿ ಸಾರ್… ಎನ್ನುವ ಪ್ರೀತಿಯ ಕರೆ

ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ  ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಲೇಖನ 

Read More

‘ಗಂಟಿಚೋರ್’ ಎಂಬ ಐಡೆಂಟಿಟಿ ಅಥವಾ ಗುರುತಿನ ಪ್ರಶ್ನೆ

ಕರ್ನಾಟಕ ಸರಕಾರವು ೧೯೭೬ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಮೆಂಡ್‌ಮೆಂಟನ್ನು ಪಾಸು ಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ‘ಗಂಟಿಚೋರ್’ ಹೆಸರು ಮಾತ್ರ ಸೇರಿ ಅದರ ಜತೆ ಇದ್ದ ಸಮಾನಾಂತರ ಪದಗಳನ್ನು ಕೈಬಿಡಲಾಯಿತು. ಈ ಪಟ್ಟಿಯು ಗಂಟಿಚೋರ್ ಸಮುದಾಯಕ್ಕೆ ಬಿಕ್ಕಟ್ಟನ್ನು ತಂದಿಟ್ಟಿತು. ಕಾರಣ ಒಂದೇ ಸಮಾನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ, ಪಾತ್ರೂಟ್ ಹೊರಗುಳಿದವು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ