Advertisement

Category: ಸರಣಿ

ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ

‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್‌ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ

Read More

‘ಗಣಿತೀಯ ಗೀತರಚನೆಕಾರ’: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಟೋಬಿ ಎಂಬ ಶಿಕ್ಷಕ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಆರನೆಯ ಬರಹ

Read More

ಭಾಷೆಯೆಂಬ ಬದುಕು ಮತ್ತು ಬಾಲ್ಯದ ಬಣ್ಣದ ಕನಸುಗಳು: ರಾಮ್ ಪ್ರಕಾಶ್ ರೈ ಕೆ ಸರಣಿ

ವೇಷ ತೆಗೆಯದೆ ಯುದ್ಧಕ್ಕೆ ಹೊರಡುವ ಉಪಾಧ್ಯಾಯರು, ರಾಮಣ್ಣನ ಮಾತುಕತೆ, ಮಹೇಂದ್ರನ ಚೇಷ್ಟೆ, ಅನಂತ ಪದ್ಮನಾಭರ ನಡುವಿನ ಜಗಳ, ಪಿ ಟಿ ಮಾಸ್ತರ್‌ರ ಗುಪ್ತ ಪ್ರೇಮ, ಮಕ್ಕಳ ಹೋರಾಟದ ಕೆಲವು ಭಾಗಗಳು ಎಲ್ಲವೂ ಇಲ್ಲಿ ಹೈಲೈಟು. ಹಾಗೆಂದು ಚಿತ್ರ ಹಾಸ್ಯಕ್ಕೆ ಸೀಮಿತಗೊಳ್ಳದೆ, ತಾನು ಹೇಳಬೇಕಾದ ಗಂಭೀರ ವಿಚಾರವನ್ನು ಭಾವಪೂರ್ಣವಾಗಿ ಹೇಳುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಬದುಕು ಮತ್ತು ಸುಂಟರಗಾಳಿ: ಗುರುಪ್ರಸಾದ ಕುರ್ತಕೋಟಿ ಸರಣಿ

ಅವತ್ತು ಅರುಣ್ ಯಾಕೋ ಯೋಚನೆಯಲ್ಲಿ ಇದ್ದಂತೆ ಕಂಡರು. ಯಾಕೆ ಏನಾಯ್ತು ಅಂತ ಕೇಳಬೇಕು ಅನಿಸಿದರೂ ಸುಮ್ಮನಿದ್ದೆ. ಅಲ್ಲಿಗೆ ಹೋಗಿ ಹಲವು ವರ್ಷಗಳು ಅಲ್ಲಿಯೇ ನೆಲೆಸಿದ ಮೇಲೆ ನಮ್ಮ ಎಷ್ಟೋ ದೇಸಿಗಳೂ ಕೂಡ ಅಮೆರಿಕದವರಂತೆಯೇ ಆಗಿಬಿಟ್ಟಿರುತ್ತಾರೆ. ಹಾಗೆಲ್ಲಾ ಯಾರಿಗೂ ವೈಯುಕ್ತಿಕ ವಿಷಯಗಳನ್ನು ಏನೂ ಕೇಳೋ ಹಾಗಿಲ್ಲ. ಆದರೆ ಅವರು ಹಾಗಿರಲಿಲ್ಲ. ತಾವೇ ತಮ್ಮ ಬೇಜಾರಿನ ಕಾರಣವನ್ನು ಅರುಹಿದರು. ಅವರಿಗೂ ತಮ್ಮ ದುಗುಡಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕಿತ್ತು ಅನಿಸಿತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೇಳನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ