Advertisement

Category: ಸಾಹಿತ್ಯ

ಡಾ. ಜ್ಯೋತಿ ಬರೆದ ಈ ಭಾನುವಾರದ ಕಥೆ

“ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಕ್ಷತಾ ಹುಂಚದಕಟ್ಟೆ ಬರೆದ ಕಥೆ

“ನಾನು ಧಡಕ್ಕನೇ ಎದ್ದು ಕೂತೆ. ಆ ಹುಡುಗ ಅಮ್ಮ ಅವಳು ಎದ್ದಳ್ ಎದ್ದಳ್ ಎಂದು ಕೂಗಿಕೊಳ್ತಾ ಓಡಿದ. ಮೈತುಂಬಾ ಬೆವರು ಹರಿಯುತ್ತಿತ್ತು. ಆ ಹುಡುಗಿ, ಎದ್ದೇಳಾ? ಆ ಕಡೆ ಗುಡ್ಡದಲ್ಲಿ ರಾಶಿ ಮುಳ್ಳು ಹಣ್ಣು ಬಿಟ್ಟಿತ್ತು. ನಿನ್ನ ಕರ್ಕಂಡು ಹೋಗಣಾ ಅಂತ್ಹೇಳಿ ಕಾಯ್ತಾ ಕೂತ್ಕಂಡಿದ್ದ್ ಅಂತ್ಹೇಳಿ ನನ್ನ ಕೈ ಹಿಡಿದು ಎಳೆಯತೊಡಗಿದಳು. ಅಷ್ಟರಲ್ಲಿ ಅಮ್ಮಮ್ಮ ಬಂದ್ಬಿಟ್ಟು ಮೈ ಕೈಯಲ್ಲ ಮುಟ್ಟಿ ಜ್ವರ ಬಿಟ್ಟಿದೆ.
‘ನಾನು ಮೆಚ್ಚಿದ ನನ್ನ ಕಥೆʼಯ..”

Read More

ಎಸ್. ನಾಗಶ್ರೀ ಬರೆದ ಕಥೆ ‘ಬೆಳಕ ಹಾದಿ’

“ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು….”

Read More

‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

“ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು.”

Read More

ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ

“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ