Advertisement

Category: ಸಾಹಿತ್ಯ

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “

Read More

ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….”

Read More

“ಮೂರ್ತಣ್ಣ”: ದರ್ಶನ್ ಜೆ. ಬರೆದ ಈ ವಾರದ ಕತೆ

“ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ…”

Read More

ಎ.ಎನ್. ಪ್ರಸನ್ನ ಅವರ ಕಥಾ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮಾತುಗಳು

“ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ

“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ