Advertisement

Category: ವಾರದ ಕಥೆ

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ

‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ.
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಸುಳಿಹೊಳೆ ಕಥಾಧಾಮ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ

ಒಮ್ಮೆ ನಾವಿಬ್ಬರೂ ಮಾತನಾಡುವ ಪ್ರಸಂಗ ಬಂದಾಗ ನಾನು ನನ್ನ ಕುಲದ ಬಗ್ಗೆ ಹೇಳಿದೆ; ಆ ಸಾಂಪ್ರದಾಯಿಕ ಬೇಲಿಯನ್ನು ಹಾರಬೇಕೆಂಬ ಆಸೆಯನ್ನು ತೋಡಿಕೊಂಡೆ. ಬಿಸಿ ರಕ್ತ, ವಿಚಾರವಂತಿಕೆಯ ಮೆದುಳು ಅವನಿಗೆ ಬಲ ತುಂಬಿತ್ತು. ಊರಿನ ಹಿರೀಗೌಡನಾದರೋ ಸರ್ವಾಂಗ ಸುಂದರಿ-ತೊಳೆದ ಮುತ್ತಿನಂತಿದ್ದ ನನ್ನನ್ನು ನೋಡಿ ಜೊಲ್ಲು ಸುರಿಸಿದ್ದು ತಿಳಿದ ದಿನ ಮೈಮೇಲೆ ಹಾವು-ಚೇಳು ಹರಿದಂತಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ “ನಾ ಸಾಯಬೇಕು…”

Read More

ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ

ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ.
ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ “ಸುಟ್ಟಿರದೇ ಮೂರ್ ದ್ವಾಸ…” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ

ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ “ಗಂಧ”

Read More

ಕರುಣ ಪ್ರಸಾದ್ ಕೆ ಎಸ್ ಬರೆದ ಈ ಭಾನುವಾರದ ಕಿರುಕತೆ

ಅವರೇನಾದರೂ ಅಸೂಯೆಯಿಂದ ನಿಂದಿಸಿದರೆ ನಾನು ಸಿಟ್ಟುಗೊಳ್ಳುವುದಿಲ್ಲ ಮತ್ತೆ ಗುಡ್ಡದ ತರ ಸ್ತಬ್ಧನಾಗುತ್ತೇನೆ. ಮತ್ತೆ ಅವರಿಗೆ ನಿಲುಕದ ಪರ್ವತವಾಗುತ್ತೇನೆ. ಇದು ಇಷ್ಟು ದಿನ ಅವರು ನನ್ನನ್ನು ತಯಾರು ಮಾಡಿದ ರೀತಿಗೆ ನನ್ನ ಪ್ರತಿಭಟನೆ. ಇದರಲ್ಲಿ ಅವರ ರೀತಿಯಲ್ಲಿ ಬದುಕುವುದು ನಾನೆಯಾದರು ಸೋಲುವುದು ಮಾತ್ರ ಅವರು, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ನಾನು ನಿಸರ್ಗದ ತತ್ವಕ್ಕೆ ತಕ್ಕನಾಗಿ ನಾನು ನಿಸರ್ಗವಾಗಿದ್ದೇನೆ.
ಕರುಣ ಪ್ರಸಾದ್ ಕೆ ಎಸ್ ಬರೆದ ಈ ಭಾನುವಾರದ ಕಿರುಕತೆ “ಓಡುವವನ ಅಂತರಾಳ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ