Advertisement

Category: ವಾರದ ಕಥೆ

ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ

ಏನಾಗುತ್ತಿದೆಯೆಂದು ಅವರಿಗೆ ಅರ್ಥವಾಗುವ ಮೊದಲೇ ಬೆಂಕಿ ಅರ್ಧದಷ್ಟು ತೋಟಕ್ಕೆ ವ್ಯಾಪಿಸಿತ್ತು. ಅನಿರೀಕ್ಷಿತವಾಗಿ ಘಟಿಸಿದ ಅನಾಹುತ ಕಂಡು ಮಾತುಹೊರಡದೇ ನಿಂತಿದ್ದ ಅಂಬಿಕಾ ಈಗ ಜೋರಾಗಿ ಕಿರುಚಲಾರಂಭಿಸಿದರು. “ಅಯ್ಯೋ, ಯಾರಾದರೂ ಓಡಿ ಬನ್ನಿ.. ನಮ್ಮನ್ನು ಕಾಪಾಡಿ… ಯಾರಾದರೂ ಬನ್ನಿ, ಬೆಂಕಿ ನಂದಿಸಿ….” ನೆರೆಮನೆಯಿಂದ ಕೇಳಿದ ಆರ್ತನಾದ, ಎತ್ತರದಲ್ಲಿ ಕಾಣುತ್ತಿರುವ ಬೆಂಕಿಯ ಕೆನ್ನಾಲಿಗೆ, ಆಗಿರಬಹುದಾದ ಅನಾಹುತದ ಚಿತ್ರಣವನ್ನು ಶಂಕರಣ್ಣನಿಗೆ ಕಟ್ಟಿಕೊಟ್ಟಿತು.
ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ “ಹೊರಗಿನ ಬೆಂಕಿ ಮತ್ತು ಒಳಗಿನ ಕಳೆ” ನಿಮ್ಮ ಓದಿಗೆ

Read More

ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ

ಮೇಕೆಗಳೆಲ್ಲವೂ ರಸ್ತೆ ದಾಟಿದ ಮೇಲೆ ಲಾರಿ ಮುಂದಕ್ಕೆ ಚಲಿಸಲು ಆರಂಭಿಸಿತು. ಅದರದ್ದು ಈಗಲೂ ಒಂದೇ ವೇಗ. ನಿಂತುಕೊಂಡಿದ್ದವನು ಮತ್ತೆ ಲಾರಿಯಲ್ಲಿ ಕುಳಿತೆ. ಇನ್ನೊಮ್ಮೆ ನಾಯಿ ಕಡೆಗೆಯೇ ನೋಡಿದೆ. ಆಕಾಶದೆಡೆಗೆ ನೋಡುತ್ತಿದ್ದ ನಾಯಿ ತನ್ನ ಕಣ್ಣಿನಲ್ಲಿ ಏನನ್ನು ತುಂಬಿಕೊಳ್ಳುತಿತ್ತೋ, ಅದರ ಅಂತರಾತ್ಮ ಅದರೊಳಗಿನ ಪರಮಾತ್ಮ ಅದಕ್ಕೆ ಬದುಕಿನ ಯಾವ ದಿವ್ಯ ರಹಸ್ಯವನ್ನು ಹೇಳುತ್ತಿತ್ತೋ ಆ ಮೂಲಕ ಅದು ನನಗೆ ಏನನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನ ಪಡುತ್ತಿದೆಯೋ ಎನ್ನುವುದು ನನಗೆ ಒಂಚೂರೂ ಗೊತ್ತಾಗಲಿಲ್ಲ.
ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ “ಮೇಘ ಮಲ್ಹಾರ”

Read More

ಶಾಂತಿ ಕೆ. ಅಪ್ಪಣ್ಣ ಈ ಭಾನುವಾರದ ಕಥೆ

ಅದು ವಿಷಯ! ಅಲ್ಲಿಗೆ ವಯಸ್ಸಾಗಿರುವುದು ಯಾವುದಕ್ಕೆ? ದೇಹಕ್ಕೆ ಮಾತ್ರವೇ? ಮನಸು ಪಕ್ವವಾಗುವುದು ಅನ್ನುತ್ತಾರಲ್ಲ ಅದೇನದು? ಆಯ್ಕೆಗಳನ್ನೆಲ್ಲ ಬದಿಗೊತ್ತಿ, ಹೆಚ್ಚು ತಕರಾರು ಮಾಡದೆ, ಇರುವುದನ್ನು ಒಪ್ಪಿಕೊಂಡು, ಒಪ್ಪಲಾಗದಿದ್ದರೂ ಒಪ್ಪಿಸಿಕೊಂಡು, ಅಪ್ಪಿಕೊಂಡು, ದಬ್ಬಿಸಿಕೊಂಡು ಹೇಗಾದರೊಂದು ಬದುಕುವುದೆ? ಅಥವಾ ಪರಿಸ್ಥಿತಿಗೆ ತಲೆಬಾಗಿ ಸ್ಥಿತಪ್ರಜ್ಞೆಯನ್ನು ಆರೋಪಿಸಿಕೊಂಡು ಒಳಗೊಳಗೇ ಬೇಯುತ್ತ, ಬೇಯುವಿಕೆಯ ಕಮಟು ವಾಸನೆ ಹೊರಗೆ ತೋರದಂತೆ ಕಾಯುತ್ತ, ಹೀಗೆ ಬೇಯುವುದೇ ಜೀವನದ ಸಾರ್ಥಕತೆಯೆಂದುಕೊಂಡು ಸುಳ್ಳೇ ನಂಬಿಸಿಕೊಳ್ಳುವುದೆ?
ಶಾಂತಿ ಕೆ. ಅಪ್ಪಣ್ಣ ಬರೆದ ಈ ಭಾನುವಾರದ ಕಥೆ “ಚಿತ್ರಕಾರನ ಬೆರಳು”

Read More

ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ

ಅವಳು ಕಿರುನಿದ್ದೆಯಿಂದ ಎದ್ದಾಗ ಈಗಾಗಲೇ ಅಜ್ಜಯ್ಯನ ಅಂಗಡಿಗೆ ಸಾಮಾನಗಳ ಪಟ್ಟಿ ಕೊಟ್ಟು ನಾಲ್ಕು ಗಂಟೆಗಳಾದ ನೆನಪು ಆಯಿತು. ಮೊದಲು ತಡವಾಗಬಹುದೆಂದು ಅಮ್ಮನಿಗೆ ಬೇಕಾದ ಅಕ್ಕಿಯನ್ನು ತರಲು ಚೀಲ ಒಯ್ಯುವುದು ಎಂದುಕೊಂಡಳು. ಅಂಗಡಿಯವನು ಇನ್ನೊಂದು ಗಂಟೆಯಲ್ಲಿ ಸಾಮಾನು ತಂದುಕೊಡುವುದಾಗಿ ಹೇಳಿದ್ದರಿಂದ ಆ ಯೋಚನೆ ಕೈಬಿಟ್ಟಳು. ಕಿರಿಕಿರಿ ಉಂಟಾಗಿ ಅಂಗಡಿಗೆ ಫೋನ್ ಮಾಡಿದಳು “ತಲುಪಲು ಸಾಧ್ಯವಾಗುತ್ತಿಲ್ಲ” ಎಂಬ ಉತ್ತರ ಬಂದಿತು.
ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ “ಶಾಹೀನಳ ದುಃಸ್ವಪ್ನ” ನಿಮ್ಮ ಈ ಭಾನುವಾರದ ಓದಿಗೆ

Read More

ಶಿವಕುಮಾರ ಚನ್ನಪ್ಪನವರ ಬರೆದ ಈ ಭಾನುವಾರದ ಕಥೆ

ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ