Advertisement

Category: ವಾರದ ಕಥೆ

ಆವನಾವನು ಕಾಯ್ವ : ಸರಿತಾ ನವಲಿ ಬರೆದ ಕತೆ

ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು.

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್”

“ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ?”

Read More

ತಬ್ಬಲಿಗಳು: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕತೆ

“ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಂದೆ”

“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.”

Read More

ಜರಿಲಂಗ ಮತ್ತು ಸಣ್ಣು: ನಾಗರೇಖಾ ಗಾಂವಕರ ಬರೆದ ವಾರದ ಕತೆ

“ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ