Advertisement

Category: ದಿನದ ಪುಸ್ತಕ

ಧರ್ಮಯುದ್ಧ ಕಾದಂಬರಿಯ ಕೆಲವು ಪುಟಗಳು

ಸುಕ್ಕ ಯಾನೆ ಸುಕುಮಾರನಿಗೆ ಶೇಂದಿ ಶರಾಬು ಕುಡಿಯುವ ಅಭ್ಯಾಸ ಆ ದಿನಗಳಲ್ಲಿ ಇರಲಿಲ್ಲ. ಆದರೆ ಒಮ್ಮೆಲೇ ಕುಳಿತು ಎರಡು ಬಾಟ್ಲಿ ಬಿಯರ್ ಕುಡಿಯುವ ತಾಕತ್ತು ಅವನಲ್ಲಿತ್ತು. ಅವನಂಥವನನ್ನು ಜನ ‘ಕುಡುಕ’ ಎನ್ನುತ್ತಿರಲಿಲ್ಲ. ‘ದೊಡ್ಡವರು ಕುಡಿಯುವುದಿಲ್ಲವೇ ಆರೋಗ್ಯಕ್ಕೆ’ ಎನ್ನುತ್ತಿದ್ದರು. ಸುಕ್ಕನಿಗೆ ಇದು ಗೊತ್ತಿತ್ತು. ಕಂಟ್ರಿ ಜನಗಳ ಹಾಗೆ ಕುಡಿದರೆ ತಾನೂ ಅವರಲ್ಲೊಬ್ಬನಾಗುತ್ತೇನೆ. ತಾನು ಅವರ ಹಾಗೆ ಆಗಬಾರದು, ಜನರನ್ನೆಲ್ಲ ನಿಯಂತ್ರಿಸುವ ಜನಪ್ರತಿನಿಧಿಯಾಗಬೇಕು ಎಂದು ಆತ ಬಹಳ ದಿನಗಳಿಂದ ಯೋಚಿಸುತ್ತಿದ್ದ. ಆ ಯೋಚನೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಗತವಾಗಿತ್ತು.
ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಧರ್ಮಯುದ್ಧ’ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

‘ನಾಲ್ಕನೇ ಎಕರೆ’ಗೆ ಅಜಯ್ ವರ್ಮಾ ಅಲ್ಲೂರಿ ಬರೆದ ಮಾತುಗಳು

ತೆಲುಗಿನ ಪ್ರಸಿದ್ಧ ಲೇಖಕ ಶ್ರೀರಮಣ ಅವರು 2019ರಲ್ಲಿ ಬರೆದ `ನಾಲುಗೋ ಎಕರಂ’ ಎಂಬ ನೀಳ್ಗತೆಯನ್ನು ಯುವಲೇಖಕ ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀರಮಣ ಅವರ ‘ಮಿಥುನಂ’ ಕಥೆಯನ್ನು ಕಥೆಗಾರ ವಸುಧೇಂದ್ರ ಅವರು ಕನ್ನಡಕ್ಕೆ ತಂದಾಗ, ಅವರ ಕಥನ ಶೈಲಿಯನ್ನು ಕನ್ನಡದ ಓದುಗರು ಬಹಳ ಮೆಚ್ಚಿಕೊಂಡಿದ್ದರು. ಇದೀಗ ಶ್ರೀರಮಣರ ಮತ್ತೊಂದು ನೀಳ್ಗಥೆಯ ಅನುವಾದವನ್ನು ‘ಛಂದ ಪುಸ್ತಕ’ ಪ್ರಕಟಿಸಿದೆ. ‘ನಾಲ್ಕನೇ ಎಕರೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಅನುವಾದಕ ಅಜಯ್ ವರ್ಮಾ ಅಲ್ಲೂರಿ ಬರೆದ ಮಾತುಗಳು ಇಲ್ಲಿವೆ.

Read More

ಲಂಕೇಶರ ‘ಅಕ್ಕ’: ಕನ್ನಡದಲ್ಲಿ ಬಂದ ವಿಶಿಷ್ಟ ಕಾದಂಬರಿ

ಈ ಕಾದಂಬರಿಯಲ್ಲಿ ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್‌ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಇವೆರಡು ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನುಈ ಕೃತಿಯ ಮೂಲಕ ಲಂಕೇಶ್‌ರಿಗೆ ಹೇಳಬೇಕಿತ್ತು.
ಪಿ.ಲಂಕೇಶರ ‘ಅಕ್ಕ’ ಕಾದಂಬರಿಯ ಕುರಿತು ನಾಗರಾಜ ಹರಪನಹಳ್ಳಿ ಬರಹ

Read More

“ಬಾರೆ ರಾಜ ಕುಮಾರಿ ಹೋಗೋಣ ಜಂಬೂ ಸವಾರಿ……”

ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ ತಲೆ ಮೇಲೆ ಕೈಇಟ್ಟುಕೊಂಡೆ. ರೀ…. ರೀ… ಎಂದು ಬೊಬ್ಬೆ ಹಿಡಿದರೂ ಕೇಳಲಿಲ್ಲ. ‘ಕರೆದರೂ ಕೇಳದೆ….’ ಎನ್ನುವ ಹಾಡು ನನಗಾಗಿಯೆ ಬರೆದಿದ್ದಾರೆ ಎನ್ನಿಸಿತು. ಹೆಚ್ಚು ಬೊಬ್ಬೆ ಹೊಡೆಯಲು ಭಯವೂ ಆಯಿತು.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ ‘ಹೋಗೋಣ ಜಂಬೂ ಸವಾರಿ’ ಲಲಿತ ಪ್ರಬಂಧಗಳ ಸಂಕಲನದಿಂದ ಒಂದು ಪ್ರಬಂಧ

Read More

ಬದುಕಿನೆಡೆಗೆ ವಿನೀತ ಭಾವ ಮೂಡಿಸುವ ‘ಶ್ರೀ ರಾಮಕಥಾವತಾರ’

ಈ ಮೇಲಿನ ಎರಡು ಸ೦ವಾದಗಳನ್ನು ಓದಿದರೆ ಸಾಕು, ಪುಸ್ತಕವನ್ನು ಮುಚ್ಚದೆ ಓದಿಕೊ೦ಡು ಹೋಗಬೇಕು ಎನಿಸುವಷ್ಟು ಬರವಣಿಗೆ ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸ೦ವಾದದಲ್ಲಿ, ಇಡೀ ರಾಮಾಯಣದ ಮಹಿಮೆಯನ್ನು ಪುಸ್ತಕ ರಚನಕಾರರು ತೆರೆದಿಟ್ಟಿದ್ದಾರೆ. ಎರಡನೇ ಸ೦ವಾದದಲ್ಲಿ, ವಿದ್ಯೆ ಎ೦ದರೆ ಏನೇನನ್ನೆಲ್ಲಾ ಒಳಗೊ೦ಡಿರಬೇಕು, ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ವಿದ್ಯೆ ಯಾವುದು? ಎ೦ಬುದನ್ನು ಸರಳವಾಗಿ ಅರ್ಥವಾಗುವ೦ತೆ ಲೇಖಕರಾದ ಶ್ರೀ ಕೆ.ಎಸ್.ನಾರಾಯಣಾಚಾರ್ಯರು ಆಕರ್ಷಕ ರೀತಿಯಲ್ಲಿ ಬರೆದು ಓದುಗನ ಕುತೂಹಲವನ್ನು ಹೆಚ್ಚಿಸುವ೦ತೆ ಮಾಡಿದ್ದಾರೆ.
ಡಾ || ಕೆ.ಎಸ್.ನಾರಾಯಣಾಚಾರ್ಯ ಬರೆದ ಶ್ರೀ ರಾಮಕಥಾವತಾರ ಪುಸ್ತಕದ ಕುರಿತು ನಯನಾ ಭಿಡೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ