Advertisement

Category: ದಿನದ ಪುಸ್ತಕ

ಅಬ್ದುಲ್‌ ರಶೀದ್‌ ಕಥಾಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮಾತುಗಳು

“ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು,…”

Read More

ಚನ್ನಪ್ಪ ಕಟ್ಟಿ ಅನುವಾದಿಸಿದ ʼಸ್ಕಾರ್ಲೆಟ್ ಪ್ಲೇಗ್ʼ ಕಾದಂಬರಿ ಕುರಿತು ನಾಗರೇಖಾ ಗಾಂವಕರ ಬರಹ

“ಬಿಲ್ ಮತ್ತು ಗ್ರ್ಯಾನ್ಸರ್ ಕುಟುಂಬದ ಸಂತಾನಗಳು ಮುಂದೆ ವಿವಾಹವಾಗಿ ಹುಟ್ಟಿದ ಮಕ್ಕಳು ಇಂದು ಗ್ರ್ಯಾನ್ಸರ್ ಜೊತೆಯಾಗಿದ್ದಾರೆ. ಇಂದು ಹಣ್ಣು ಹಣ್ಣು ಮುದುಕ ಆತ ಮೊಮ್ಮಕ್ಕಳ ಜೊತೆ ಕಾಡುಮೇಡು ಅಲೆಯುತ್ತಾ ಆ ದಿನದ ಆಹಾರದ ಹುಡುಕಾಟದಲ್ಲಿದ್ದಾನೆ. ಮೊಮ್ಮಕ್ಕಳು ಅನಾಗರಿಕರಂತೆ ತಮ್ಮ ತಾತನ ಅಸಹಾಯಕತೆಯನ್ನು ಗೇಲಿ ಮಾಡಿ ನಗುತ್ತವೆ. ಆತ ಬಳಸುವ ಸುಶಿಕ್ಷಿತ ಭಾಷೆ ಅವರಿಗೆ ಅಪಥ್ಯವೆನಿಸುತ್ತದೆ. ಸರಳವಾಗಿ ತಮಗೆ…”

Read More

ಎನ್.‌ ಬಿ. ಚಂದ್ರಮೋಹನ್‌ ಅನುವಾದಿತ ಕವನ ಸಂಕಲನಕ್ಕೆ ಎಚ್‌.ಎಸ್.‌ ರಾಘವೇಂದ್ರರಾವ್‌ ಬರೆದ ಮುನ್ನುಡಿ

“ಹೀಗೆ ಹಲವು ಕಾಲ, ದೇಶ, ಸಂದರ್ಭಗಳಲ್ಲಿ ರೂಪಿತವಾದ ಕವಿತೆಗಳಲ್ಲಿ ಒಟ್ಟಿಗೆ ಆಕೃತಿ ಮತ್ತು ನಿರೂಪಣೆಯ ವಿಧಾನಗಳಲ್ಲಿ ಸಹಜವಾಗಿಯೇ ಅಂತರವಿರುತ್ತದೆ. ಕೆಲವು ಕವಿಗಳಿಗೆ ಹೇಳಬೇಕಾದ್ದನ್ನು ರೂಪಕಗಳಲ್ಲಿ, ಪ್ರತಿಮೆಗಳಲ್ಲಿ ಮುಚ್ಚಿಬರೆಯುವ ಅನಿವಾರ್ಯತೆಯಿರುತ್ತದೆ. ಏಕೆಂದರೆ ಅವುಗಳ ದಮನವು ಮುಂದುವರಿದಿರುತ್ತದೆ. ಅದರ ಜೊತೆಗೆ ನೇರವಾದ..”

Read More

ರಾಗಂ ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

“ಕೊಂಚ ಮನ ತಹಬದಿಗೆ ಬಂದಂತಾಗಿ, ಗೆಳೆಯರೊಬ್ಬರ ಮನೆಗೆ ಹೋಗಿ, ಅಲ್ಲಿದ್ದ ಪುಟ್ಟ ಕಂದಮ್ಮಗಳ ಬೊಗಸೆ ತುಂಬಿಸಿಕೊಂಡು ಮುದ್ದಾಡಿದೆ. ಮಗಳಂತೆ ಕಾಣುವ ಅಪ್ಪ-ಅಮ್ಮನ ಜೊತೆ ಮಾತಾಡಿ, ಕೀಟ್ಸ್‍ ನ ಸಹವಾಸದಿಂದ ಹೊರಬಂದೆ. ‘ಯಪ್ಪಾ, ಬದುಕಿದೆ’ ಅಂತ ನಿಟ್ಟುಸಿರು ಬಿಟ್ಟೆ. ಮಹಾಶಯ ಕೈಬಿಡಲೇ ಇಲ್ಲ. ಮರುದಿನ ಮತ್ತೆ ಅವನದೆ ಕನವರಿಕೆ, ಮುಂದೇನಾಯಿತು? ನಮ್ಮ ದೋಸ್ತನಿಗೆ ಎಂಬ ಹಳವಂಡ. ಮತ್ತೆ ತೆಕ್ಕೆಗೆಳೆದುಕೊಂಡು ಅವನೊಂದಿಗೆ ಮಾತಾದೆ”

Read More

ಚೇತನ್‌ ಭಗತ್‌ ಬರೆದ ‘ಒನ್ ಅರೆಂಜ್ಡ್ ಮರ್ಡರ್’ ಕಾದಂಬರಿಯ ಕುರಿತು ಭಾಗ್ಯಶ್ರೀ ಎಂ.ಎಸ್. ಬರಹ

“‌ಅಂಜಲಿ ಒಬ್ಬ ಇಂಡೋ-ಅಮೇರಿಕನ್ ಹುಡುಗಿಯಾಗಿಯೂ, ಚಾಣಾಕ್ಷ, ಸ್ವಾತಂತ್ರ್ಯ ಬಯಸುವ ಆಧುನಿಕ ಮಹಿಳೆಯಾಗಿದ್ದೂ, ವೃತ್ತಿಪರ ಪತ್ರಕರ್ತೆಯಾಗಿರುತ್ತಾಳೆ. ಇವಳೊಬ್ಬ ಭಗ್ನಪ್ರೇಮಿಯಾಗಿದ್ದೂ, ಕುಟುಂಬದವರನ್ನು ಭೇಟಿಮಾಡಲು ಭಾರತಕ್ಕೆ ಬಂದು ಮಲ್ಹೋತ್ರಾ ಕುಟುಂಬದಲ್ಲಿ ತಾನೂ ಒಬ್ಬಳಾಗಿರುತ್ತಾಳೆ. ಪ್ರೇರಣಾಳ ಸಾವಿನ ನಂತರ ಸೌರಬ್ ಮತ್ತು ಕೇಶವ್‍ ಗೆ ಮಲ್ಹೋತ್ರಾ ಕುಟುಂಬದ ಎಲ್ಲಾ ಬೆಚ್ಚಿಬೀಳಿಸುವ ರಹಸ್ಯಗಳನ್ನು ಬಿಚ್ಚಿಟ್ಟವಳು ಇವಳೇ….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ