Advertisement

Category: ಸಂಪಿಗೆ ಸ್ಪೆಷಲ್

ಮನಸ್ಸೆಂಬೊ ಮಾಯಾವಿ..: ವಿಶ್ವನಾಥ ನೇರಳೆಕಟ್ಟೆ ಬರಹ

ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ.
ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.

Read More

ನನ್ನಜ್ಜನೂ… ಮತ್ತು ಅವನ ಸೈಕಲ್ಲೂ….: ಬಸವನಗೌಡ ಹೆಬ್ಬಳಗೆರೆ ಪ್ರಬಂಧ

ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್‌ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಒರಗಿಕೊಳ್ಳುವ ಮುನ್ನ….

ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

Read More

ಅಡ್ಮಿನ್ ಸೂತ್ರಧಾರಿ, ನಾವ್ ಪಾತ್ರಧಾರಿ

ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸುಮಾವೀಣಾ ಬರಹ ನಿಮ್ಮ ಓದಿಗೆ.

Read More

ಭಾವಗೀತೆಗಳ ಭಾವಗುಚ್ಛ….

ರಾಜಕೀಯ ಭಾಷಣಗಳ ಮುನ್ನ ಜನರನ್ನು ಮೈದಾನಗಳಿಗೆ ಕರೆತರುತ್ತಿದ್ದುದೇ ಈ ಜೋರಾಗಿ ಕೇಳಿಸುತ್ತಿದ್ದ ಹಾಡುಗಳು. ಎಲ್ಲೆಲ್ಲೂ ಈ ಹಾಡುಗಳು ಮೊಳಗುತ್ತಿದ್ದವು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲಿಯಾದರೂ ಉತ್ಸವಗಳಲ್ಲಿ ಹಾಡಲು ಬಂದಾಗ ಈ ಗೀತೆಗಳನ್ನು ಹಾಡಲಿ ಎಂದು ಜನ ಅಪೇಕ್ಷೆ ಪಡುತ್ತಿದ್ದರು. ಸಿ. ಅಶ್ವಥ್ ಅವರ ಸಂಗೀತ ಮತ್ತು ವೈದ್ಯನಾಥನ್ ಅವರ ವಾದ್ಯಸಂಯೋಜನೆಯಲ್ಲಿ ಮೂಡಿ ಬಂದ ಭಾವಗೀತೆಗಳು ಇವು. ಒಂದು ರೀತಿ ಸಿನಿಮಾ ಗೀತೆಗಳು ಭಾಸವಾಗುತ್ತಿದ್ದವು.
ಕವಿ ದೊಡ್ಡರಂಗೇಗೌಡರ ಕವಿತೆಗಳನ್ನಿಟ್ಟುಕೊಂಡು ಸುಚೇಂದ್ರ ಪ್ರಸಾದ್‌ ನಿರ್ದೇಶಿಸಿರುವ ಸಿನಿಮಾ “ಮಾವು ಬೇವು” ಕುರಿತು ಬಿ.ಕೆ. ಸುಮತಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ